Advertisement

ರಿಷಭ್ ಪಂತ್ ಗೆ ಸಲಹೆ ನೀಡಿದ ಕಪಿಲ್ ದೇವ್

08:23 AM May 28, 2021 | Team Udayavani |

ಹೊಸದಿಲ್ಲಿ: ಭಾರತಕ್ಕೆ ಮೊದಲ ವಿಶ್ವಕಪ್‌ ತಂದಿತ್ತ ನಾಯಕ ಕಪಿಲ್‌ದೇವ್‌ ಯುವ ಆಟಗಾರ ರಿಷಭ್‌ ಪಂತ್‌ಗೆ ಸಲಹೆಯೊಂದನ್ನು ನೀಡಿದ್ದಾರೆ.

Advertisement

ಪ್ರತೀ ಎಸೆತವನ್ನೂ ಹೊಡೆಯಲು ಮುಂದಾಗದೆ ಕ್ರೀಸ್‌ನಲ್ಲಿ ನಿಂತು ಆಡುವುದನ್ನು ಕಲಿಯಬೇಕಿದೆ ಎಂದಿದ್ದಾರೆ.

“ರಿಷಭ್‌ ಪಂತ್‌ ಪ್ರತಿಭಾನ್ವಿತ ಆಟಗಾರ. ಅನೇಕ ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಬಲ್ಲರು. ಅವರ ಹೊಡೆತಗಳ ಮಟ್ಟ ಅದ್ಭುತವಾದದ್ದು. ಆದರೆ ಇಂಗ್ಲೆಂಡ್‌ ಟ್ರ್ಯಾಕ್‌ ಹೆಚ್ಚು ಸವಾಲಿನಿಂದ ಕೂಡಿರಲಿದೆ. ಹೀಗಾಗಿ ಪಂತ್‌ ಪ್ರತಿಯೊಂದು ಎಸೆತಕ್ಕೂ ದೊಡ್ಡ ಹೊಡೆತ ಬಾರಿಸಲು ಪ್ರಯತ್ನಿಸದೇ ಕ್ರೀಸ್‌ ನಲ್ಲಿ ಹೆಚ್ಚು ಸಮಯ ಉಳಿಯುವ ಪ್ರಯತ್ನ ಮಾಡಬೇಕು’ ಎಂದು ಕಪಿಲ್‌ ಹೇಳಿದ್ದಾರೆ.

ಸದ್ಯ ರಿಷಭ್ ಪಂತ್ ಟೀಂ ಇಂಡಿಯಾ ಜೊತೆ ಮುಂಬೈನಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ. ಜೂನ್ ಮೊದಲ ವಾರದಲ್ಲಿ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಕಿವೀಸ್ ವಿರುದ್ಧ ಟೆಸ್ಟ್  ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಭಾರತ ಆಡಲಿದೆ. ಪಂತ್ ಭಾರತದ ಪರ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next