Advertisement

ಕೋವಿಡ್-19 ಹಿನ್ನೆಲೆಯಲ್ಲಿ ಪ್ರಖ್ಯಾತ ಕನ್ವಾರ್‌ ಯಾತ್ರೆ ರದ್ದು

09:06 PM Jun 21, 2020 | Sriram |

ಡೆಹ್ರಾಡೂನ್‌: ಕೋವಿಡ್-19  ಆತಂಕದ ಹಿನ್ನೆಲೆಯಲ್ಲಿ ಶಿವಭಕ್ತರ ವಾರ್ಷಿಕ ತೀರ್ಥಯಾತ್ರೆಯಾದ “ಕನ್ವಾರ್‌ ಯಾತ್ರೆ’ಯನ್ನು ಉತ್ತರಖಂಡ ಸರ್ಕಾರ ರದ್ದುಗೊಳಿಸಿದೆ.

Advertisement

ಕೇಂದ್ರ ಗೃಹ ಸಚಿವಾಲಯ ಮತ್ತು ನೆರೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ನಂತರ ಉತ್ತರಖಂಡ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ಈ ನಿರ್ಧಾರ ಪ್ರಕಟಿಸಿದ್ದಾರೆ.

ಸುಮಾರು 2 ತಿಂಗಳು ನಡೆಯುವ ಕನ್ವಾರ್‌ ಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಉತ್ತರಪ್ರದೇಶ, ದೆಹಲಿ, ಹರ್ಯಾಣಗಳ ಭಕ್ತರು ಹರಿದ್ವಾರಕ್ಕೆ ಯಾತ್ರೆಯಲ್ಲಿ ಆಗಮಿಸಿ, ಗಂಗಾಜಲ ಒಯ್ದು ತಮ್ಮ ತಮ್ಮ ಊರುಗಳ ಶಿವನಿಗೆ ಅಭಿಷೇಕ ನಡೆಸುತ್ತಾರೆ.

ಯಾತ್ರೆಗೆ ಅವಕಾಶ ಕಲ್ಪಿಸದ ರಾವತ್‌ ಸರ್ಕಾರ ಟ್ಯಾಂಕರ್‌ಗಳ ಮೂಲಕ ಗಂಗಾಜಲವನ್ನು ಭಕ್ತರ ಹಳ್ಳಿಗಳಿಗೆ ತಲುಪಿಸಲು ನಿರ್ಧರಿಸಿದೆ. ಜು.6ರಿಂದ ತೀರ್ಥಯಾತ್ರೆ ಆರಂಭವಾಗಬೇಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next