Advertisement

ಜಲ್ಲಿಕಟ್ಟು v/s ಕಂಬಳ; ಕನ್ನಡಿಗರೂ ತಮಿಳರಂತೆ ಒಗ್ಗಟ್ಟು ಪ್ರದರ್ಶಿಸಿ

03:42 PM Jan 21, 2017 | Team Udayavani |

ಬೆಂಗಳೂರು: ತಮಿಳುನಾಡಿನ ಜನಪ್ರಿಯ ಗೂಳಿಕ್ರೀಡೆ ಜಲ್ಲಿಕಟ್ಟು ಪರ ಜನಾಕ್ರೋಶ ವ್ಯಕ್ತವಾಗುವ ಮೂಲಕ ಕೇಂದ್ರ ಸರ್ಕಾರ ಮಣಿದು ಸುಗ್ರೀವಾಜ್ಞೆ ಹೊರಡಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡದ ಸನಾತನ ಗ್ರಾಮೀಣ ಕ್ರೀಡೆ ಕಂಬಳದ ಬಗ್ಗೆಯೂ ಕನ್ನಡಿಗರು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ನವರಸ ನಾಯಕ ಜಗ್ಗೇಶ್ ಟ್ವೀಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕರಾವಳಿ ಮೂಲದ ಯುವ ನಟರಾದ ರಕ್ಷಿತ್‌ ಶೆಟ್ಟಿ, ನಿರ್ದೇಶಕ ರಿಷಬ್‌ ಶೆಟ್ಟಿ, ಶುಭಾ ಪೂಂಜಾ ಅವರು ಧ್ವನಿಗೂಡಿಸಿದ್ದಾರೆ. 

Advertisement

ಕಂಬಳ ಕ್ರೀಡೆಗೆ ಸಂಬಂಧಿಸಿದಂತೆ ಕನ್ನಡಿಗರಲ್ಲಿ ಒಗ್ಗಟ್ಟಿನ ಕೊರತೆ ಇದೆ. ಈಗಲಾದರು ಒಂದಾಗಿ, ಕನ್ನಡಿಗರು ಯಾವುದರಲ್ಲೂ ಕಮ್ಮಿ ಇಲ್ಲ. ಶುರುವಾಗಲಿ ಒಗ್ಗಟ್ಟಿನ ಮಂತ್ರ. ಒಂದಾಗಿ ಹೋರಾಡಲಿ ನ್ಯಾಯಕ್ಕೆ ಎಂದು ಕರೆ ಕೊಟ್ಟಿದ್ದಾರೆ.

ಜಗ್ಗೇಶ್ ಟ್ವೀಟ್ ಗೆ ಟ್ರೋಲ್ ಹೈಕ್ಳು ವ್ಯಂಗ್ಯವಾದ ಚಾಟಿ ಬೀಸಿದ್ದು, ಕುದುರೆ ಮೇಲೆ ಜಾಕಿಗಳು ಕೂತು ನಡೆಸುವ ರೇಸ್ ಕ್ರೀಡೆಯಾಗಿದೆ, ಆದರೆ ರೈತರು ಕೋಣನ ಹಿಂದೆ ಓಡುವುದು ಪ್ರಾಣಿ ಹಿಂಸೆಯಂತೆ! ಎಂಬುದಾಗಿ ತಿರುಗೇಟು ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next