Advertisement
ಹೋರಾಟದ ಕೂಗು ಕೇವಲ ಘೋಷಣೆಗಳಲ್ಲಷ್ಟೇ ಆದರೆ ಪ್ರಯೋಜನವಿಲ್ಲ ಎಂದರಿತ, ಬೆಂಗಳೂರು ಸೇರಿ ರಾಜ್ಯದ ಬೇರೆ ಬೇರೆ ಭಾಗಗಳ ಯುವಕರನ್ನೊಳಗೊಂಡ ತಂಡವೊಂದು ವಿಭಿನ್ನ ಅಭಿಯಾನಕ್ಕೆ ಇಳಿದಿದೆ.”ಹಿಂದಿ, ಇಂಗ್ಲಿಷ್ ಇರಲಿ, ಅಭ್ಯಂತರವಿಲ್ಲ. ಆದರೆ ಮೊದಲು ಕನ್ನಡ, ಆಮೇಲೆ ಉಳಿದದ್ದು’ ಎನ್ನುವ ಸದುದ್ದೇಶದೊಂದಿಗೆ ಈಗ ಪ್ರಾಯೋಗಿಕ ಅಭಿಯಾನದೊಂದಿಗೆ ಬೀದಿಗಿಳಿದಿದೆ. ಅತ್ತ ರಾಷ್ಟ್ರೀಯ ಹೆದ್ದಾರಿಗಳ ಮೈಲಿಗಲ್ಲುಗಳಲ್ಲಿ ಹೆದ್ದಾರಿ ಪ್ರಾಧಿಕಾರ ಹಿಂದಿ, ಇಂಗ್ಲಿಷ್ನಲ್ಲಿ ಊರ ಹೆಸರು ಬರೆಯುತ್ತಾ ಹೋದರೆ, ಈ ತಂಡದ ಸದಸ್ಯರು ಬಣ್ಣ, ಕುಂಚ ಕೈಗೆತ್ತಿಕೊಂಡು ಕನ್ನಡದಲ್ಲಿ ಊರ ಹೆಸರು ಬರೆಯುತ್ತಾ ಹೋಗುತ್ತಾರೆ. ಹಾಗೆಂದು ಇಂಗ್ಲಿಷ್, ಹಿಂದಿಯನ್ನು ಅಳಿಸುವುದಿಲ್ಲ. ಅದರ ಮೇಲ್ಭಾಗದಲ್ಲಿ ಕನ್ನಡ ಬರೆದು, “ಕನ್ನಡ ಮೊದಲು’ ಎಂದು ಸಾರುತ್ತಾರೆ.
Related Articles
Advertisement
ಕಾನೂನು ಅಡ್ಡಿಯಾಗುವ ಪ್ರಶ್ನೆಯೇ ಇಲ್ಲನಾವೇನು ಅಪರಾಧ ಮಾಡುತ್ತಿಲ್ಲವಲ್ಲ ಎಂದು ಹೇಳುವ ರುಚಿತ್ ಕುಮಾರ್, ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯ ನೀಡುವುದೂ ಕಾನೂನಿನಲ್ಲಿ ಇರಬೇಕಲ್ಲವೇ? ಅಷ್ಟಕ್ಕೂ ಇಂಗ್ಲಿಷ್, ಹಿಂದಿಯನ್ನೇ ಬಳಸಬೇಕೆಂದು ಎಲ್ಲಿದೆ? ಹಿಂದಿ ರಾಷ್ಟ್ರೀಯ ಭಾಷೆ ಎಂದು ಕಲ್ಪಿಸಿಕೊಂಡು ಹೇರಿಕೆಗೆ ಮುಂದಾದರೆ ಕನ್ನಡಿಗರು ಅದನ್ನು ಒಪ್ಪಿಕೊಳ್ಳಬೇಕಾ? ಸಾಂವಿಧಾನಿಕವಾಗಿ ರಾಷ್ಟ್ರೀಯ ಭಾಷೆ ಹಿಂದಿ ಎಂದು ಎಲ್ಲಾದರೂ ಘೋಷಣೆ ಆಗಿರುವ ಬಗ್ಗೆ ನಮಗಂತೂ ಮಾಹಿತಿ ಇಲ್ಲ. ಹೀಗಾಗಿ ನಾವು ಕನ್ನಡಿಗರು, ನಮಗೆ ಕನ್ನಡದಲ್ಲೂ ಊರ ಹೆಸರು ಇರಬೇಕು ಅನ್ನೋದಷ್ಟೇ ನಮ್ಮ ವಾದ. ನಾವೇನು ಭಾಷಾ ತಾರತಮ್ಯ ಮಾಡಿಲ್ಲ. ಸರ್ಕಾರವೇ ಅದನ್ನ ಮಾಡುತ್ತಿರುವುದು. ರಾಜ್ಯ ಸರ್ಕಾರವೇ ಈ ಕೆಲಸ ಮಾಡಿದರೆ ನಮಗೆ ಇನ್ನೂ ಖುಷಿ ಇದೆ. ನಾವೂ ಜತೆಗೂಡುತ್ತೇವೆ. ಭಾಷಾ ಬಳಕೆಯನ್ನು ಪ್ರತಿಷ್ಠೆಯಾಗಿ ಯಾರೂ ತೆಗೆದುಕೊಳ್ಳದೇ, ಅಭಿಮಾನದಿಂದ ಕಾಣಬೇಕು, ಬಳಸಬೇಕು. ಜತೆಗೆ ಬ್ಯಾಂಕ್ಗಳು, ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಉತ್ತರ ಭಾರತದವರೇ ಹೆಚ್ಚಿದ್ದು, ಅವರೂ ಕನ್ನಡ ಕಲಿತುಕೊಳ್ಳಬೇಕು. ಕನ್ನಡ ಬಳಕೆಗೆ ಮುಂದಾಗಬೇಕು. ಆಗ ಕನ್ನಡ ಅನುಷ್ಠಾನ ಸಾಧ್ಯ.
– ರುಚಿತ್ ಕುಮಾರ್, ಕನ್ನಡ ಅಭಿಮಾನಿ – ಜಿಎಸ್ಬಿ ಅಗ್ನಿಹೋತ್ರಿ