Advertisement

ನುಡಿದಂತೆ ನಡೆದ ರಾಕಿಭಾಯ್ : ಸಿನಿಮಾ ಕಾರ್ಮಿಕರಿಗೆ ಪರಿಹಾರ ತಲುಪಿಸಿದ ಯಶ್

01:33 PM Jun 04, 2021 | Team Udayavani |

ಬೆಂಗಳೂರು:  ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಯಶ್, ಇದೀಗ ನುಡಿದಂತೆ ನಡೆದಿದ್ದಾರೆ. ಈ ಮೊದಲು ಘೋಷಿಸಿದಂತೆ ಚಿತ್ರರಂಗದ ಕಾರ್ಮಿಕರಿಗೆ ತಲಾ 5 ಸಾವಿರ ರೂಪಾಯಿ ಕೋವಿಡ್ ನೆರವು ನೀಡಿದ್ದಾರೆ.

Advertisement

ರಾಕಿ ಭಾಯ್ ಯಶ್ ಕೋವಿಡ್ ಕಾರಣವಾಗಿ ಕೆಲಸ ಇಲ್ಲದೆ ಮನೆಯಲ್ಲಿ ಕುಳಿತ ಕನ್ನಡ ಸಿನಿಮಾರಂಗ ನಂಬಿಕೊಂಡ ಕಾರ್ಮಿಕರು, ತಂತ್ರಜ್ಞರು, ಅಸಹಾಯಕ ಕಲಾವಿದರಿಗೆ ತಲಾ 5 ಸಾವಿರ ರೂ. ನೀಡುವುದಾಗಿ ಘೋಷಿಸಿದ್ದರು.  ಅದರಂತೆ ಇದೀಗ  ಬಹುತೇಕರ ಖಾತೆಗೆ ಹಣ ಜಮಾ ಮಾಡಿದ್ದಾರೆ.

ಮೀಸೆ ಪ್ರಕಾಶ್, ಮಂಜೇಗೌಡ, ಮೈಸೂರು ಶಿವಪ್ರಕಾಶ್ ಸೇರಿದಂತೆ ನೂರಾರು ಕಲಾವಿದರು, ತಂತ್ರಜ್ಞರು ತಮ್ಮ ಖಾತೆಗೆ ಯಶ್ ಅವರಿಂದ ಹಣ ಬಂದಿದೆ ಎನ್ನುವುದನ್ನು ಖಾತ್ರಿ ಮಾಡಿದ್ದಾರೆ. ಯಶ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಕೋವಿಡ್ ಪಿಡುಗು ಕನ್ನಡ ಚಿತ್ರರಂಗವನ್ನು ಬಾಧಿಸುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ಕೂಡ ಸಿನಿಮಾ ಚಟುವಟಿಕೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಸಂದರ್ಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್, ರವಿಚಂದ್ರನ್ ಅವರ ಪುತ್ರ ವಿ. ಮನೋರಂಜನ್, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ನಟಿ ಸಂಜನಾ ಗಲ್ರಾನಿ, ಹರ್ಷಿಕಾ ಪೂಣಚ್ಚ, ಇತ್ತೀಚಿಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಣಿತಾ ಸುಭಾಷ್ ಸೇರಿದಂತೆ ಸಾಕಷ್ಟು ಜನರು ತಮ್ಮ ಸಿನಿ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next