Advertisement

Kankanady: ಬಸ್‌ ಢಿಕ್ಕಿ; ಮಹಿಳೆ ಪವಾಡ ಸದೃಶ ಪಾರು

11:56 PM Jul 10, 2024 | Team Udayavani |

ಮಂಗಳೂರು : ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್‌ ಢಿಕ್ಕಿಯಾಗಿ ಆಕೆ ಬಸ್‌ ನಡಿಗೆ ಬಿದ್ದರೂ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಕಂಕನಾಡಿಯಲ್ಲಿ ಬುಧವಾರ ಸಂಭವಿಸಿದೆ.

Advertisement

ಬಸ್‌ ವೊಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿತ್ತು. ಆ ವೇಳೆ ಮಹಿಳೆ ಬಸ್‌ ನ ಮುಂಭಾಗದಲ್ಲಿ ರಸ್ತೆ ದಾಟಲು ಮುಂದಾದರು. ಇದನ್ನು ಗಮನಿಸದ ಚಾಲಕ ಬಸ್‌ ಚಲಾಯಿಸಿದ್ದ. ಬಸ್‌ ಮಹಿಳೆಗೆ ಢಿಕ್ಕಿ ಹೊಡೆದು ಮಹಿಳೆ ರಸ್ತೆಗೆ ಬಿದ್ದರು. ಆದರೆ ಅದೃಷ್ಟವಶಾತ್‌ ಚಕ್ರದ ಅಡಿಗೆ ಬಿದ್ದಿರಲಿಲ್ಲ. ಬಸ್‌ ಸ್ವಲ್ಪ ಮುಂದಕ್ಕೆ ಹೋಗಿದೆ. ಬಳಿಕ ಚಾಲಕ ನಿಲ್ಲಿಸಿದ್ದಾನೆ.

ಮಹಿಳೆಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಾಪಾಯ ಇಲ್ಲ ಎಂಬುದಾಗಿ ಮನೆಯವರು ಹೇಳಿದ್ದಾರೆ. ದೂರು ದಾಖಲಾಗಿಲ್ಲ’ ಎಂದು ಕದ್ರಿ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಘಟನೆಯ ಭೀಕರ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next