Advertisement

ಮೂಲ ಸೌಕರ್ಯಕ್ಕೆ ಕಣಕಾಲ ಗ್ರಾಮಸ್ಥರ ಆಗ್ರಹ

04:27 PM Oct 03, 2020 | Suhan S |

ಹೂವಿನಹಿಪ್ಪರಗಿ: ಬಸವನಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದ ದಲಿತ ಕಾಲೋನಿ ಸೇರಿದಂತೆ ಇತರೆ ಕಡೆಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಕಣಕಾಲ ಗ್ರಾಮಸ್ಥರು ಗ್ರಾಪಂ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಗ್ರಾಮದ ಯುವ ಮುಖಂಡ, ಕರವೇ ತಾಲೂಕು ಸಂಚಾಲಕ ರಾಜಶೇಖರ ಹುಲ್ಲೂರ ಮಾತನಾಡಿ, ದಲಿತ ಸಮುದಾಯದವರ ಓಣಿಗೆ ಬಂದಂತಹ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಕುಡಿಯುವ ನೀರಿಗಾಗಿ ಹಲವಾರು ಬಾರಿ ಮನವಿ ಮಾಡಿಕೊಂಡರು ಇನ್ನೂವರೆಗೆ ಬ್ಯಾಲ್ಯಾಳ ಕ್ರಾಸ್‌ದಿಂದ ಉರ್ದು ಶಾಲೆವರೆಗೂ ನೀರು ಪೂರೈಕೆಯಾಗುತ್ತಿಲ್ಲ ಎಂದರು. ಓಣಿಯಲ್ಲಿ ಸಿಸಿ ರಸ್ತೆಯೂ ಮಾಡದೆ ಸತಾಯಿಸುತ್ತಿದ್ದಾರೆ. ಕೂಡಲೇ ದಲಿತರ ಓಣಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದ ಅವರು, ಒಂದು ವೇಳೆ ಸೋಮವಾರದೊಳಗೆ ನೀರು ಪೂರೈಸದಿದ್ದರೆ ಗ್ರಾಪಂ ಬೀಗಜಡಿದು ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಭೀಮಪ್ಪ ಚಲವಾದಿ, ಶಿವರಾಜ್‌ ಮಾದರ, ಸಿ.ಜೆ. ಚಲವಾದಿ, ಎ.ಎಸ್‌. ಅಂಗಡಿ, ಸಂತೋಷ ಚಕ್ಕಳಕಿ, ಕಸ್ತೂರೆವ್ವ ಹರಿಜನ, ಮರಗವ್ವ ಮಾದರ, ನೀಲವ್ವ ಕೋಲಕಾರ, ಗೌರವ ಚಲವಾದಿ, ಪಕೀರವ್ವ ಚಲವಾದಿ, ಸತ್ಯವ್ವ ಮಾದರ, ಶಾಂತವ್ವ ತಳವಾರ, ಸಿದ್ದವ್ವ ಹೊಲೇರ, ಸುರೇಶ ಇಂಗಳಗೇರಿ, ಸಿದ್ದು ಮಜ್ಜಗಿ, ರುದ್ರಪ್ಪ ಚಿನವಾಲ, ಮಂಜು ಹುಲ್ಲೂರ, ಶಂಕ್ರು ಹುಲ್ಲೂರ, ಮಲ್ಲಿಕಾರ್ಜುನ ಹುಲ್ಲೂರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next