Advertisement

Kangana Ranaut ‘ಎಮರ್ಜೆನ್ಸಿ’ ಸಿನೆಮಾಗೂ ತಟ್ಟುವುದೇ ಬಿಸಿ?

12:21 AM Aug 30, 2024 | Team Udayavani |

ಹೊಸದಿಲ್ಲಿ: ರೈತರ ಪ್ರತಿಭಟನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ, ಬಿಜೆಪಿ(BJP) ಸಂಸದೆ ಕಂಗನಾ ರಣಾವತ್‌ಗೆ ಹೈಕಮಾಂಡ್‌ ಗುರುವಾರ ಬುಲಾವ್‌ ನೀಡಿದೆ. ಅದರಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಕಂಗನಾ ಭೇಟಿ ಯಾಗಿದ್ದು, ಇಲ್ಲಸಲ್ಲದ ಹೇಳಿಕೆ ನೀಡ ದಂತೆ ಕಂಗನಾಗೆ ನಡ್ಡಾ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Advertisement

ನಡ್ಡಾ ಅವರೊಂದಿಗೆ ಕಂಗನಾ ಅರ್ಧ ಗಂಟೆಗೂ ಅಧಿಕ ಕಾಲ ಚರ್ಚಿಸಿದ್ದಾರೆ. ಈ ವೇಳೆ ಪಕ್ಷಕ್ಕೆ ಮುಳ್ಳಾಗುವಂಥ ಹೇಳಿಕೆಗಳನ್ನು ನೀಡದಂತೆ ಕಂಗನಾರನ್ನು ಎಚ್ಚರಿಸಲಾಗಿದೆ. ಅಲ್ಲದೇ ಹರಿಯಾಣ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವಂತೆಯೇ ಕಂಗನಾರ ಹೇಳಿಕೆಗಳು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳನ್ನು ಪರಿಗಣಿಸಿ ಕಂಗನಾರನ್ನು ತರಾಟೆ ತೆಗೆದುಕೊಂಡಿದೆ ಎಂದೂ ಹೇಳಲಾಗಿದೆ.

ಎಮರ್ಜೆನ್ಸಿ ರಿಲೀಸ್‌ ರದ್ದಿಗೆ ಅರ್ಜಿ: ಕಂಗನಾ ನಟಿಸಿ, ನಿರ್ದೇಶಿಸಿರುವ ಎಮರ್ಜೆನ್ಸಿ ಸಿನೆಮಾ ಬಿಡುಗಡೆಯಾಗಬಾರದೆಂದು ಶಿರೋಮಣಿ ಅಕಾಲಿ ದಳದ ದಿಲ್ಲಿ ಘಟಕವು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಗೆ ಪತ್ರ ಬರೆದಿದೆ. ಈ ಚಿತ್ರದಿಂದ ಕೋಮುದ್ವೇಷ ಹೆಚ್ಚಿಸುವ ಹುನ್ನಾರವಿದೆ ಎಂದು ಆರೋಪಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next