Advertisement

Karnataka Govt., ಅಗ್ನಿಶಾಮಕ ಇಲಾಖೆ 68 ಚಾಲಕರ ಹುದ್ದೆ ಅಂತಿಮ

11:04 PM Sep 08, 2024 | Team Udayavani |

ಬೆಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿನ ಚಾಲಕ ತಂತ್ರಜ್ಞರ ಹುದ್ದೆಗೆ 68 ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

Advertisement

ಅಧಿ ಸೂಚನೆಯಲ್ಲಿ ಪ್ರಕಟಿಸಲಾಗಿರುವ ಖಾಲಿ ಹುದ್ದೆಗಳ ಭರ್ತಿಯನ್ನು ಹಾಲಿ ಚಾಲ್ತಿಯಲ್ಲಿರುವ ಇಲಾಖೆ ವೃಂದ ಮತ್ತು ನೇಮಕಾತಿ ನಿಯಮಗಳು-2013 ಹಾಗೂ ಇತ್ತೀಚಿನ ಸರಕಾರದ ಆದೇಶಗಳ ಅನುಸಾರ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಿ ಒಟ್ಟು 75 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಪಟ್ಟಿ ಹೊರಡಿಸಲಾಗಿತ್ತು.

ಈ ಆಯ್ಕೆಪಟ್ಟಿ ಪ್ರಕಟಗೊಂಡ ಅನಂತರ ಕೆಲವು ಅಭ್ಯರ್ಥಿಗಳು ಆಯ್ಕೆಗೊಂಡ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಇಚ್ಛೆ ಇರುವುದಿಲ್ಲವೆಂದು ಪ್ರಮಾಣ ಪತ್ರ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next