Advertisement

ಕಾಂದಿವಲಿ ಕನ್ನಡ ಸಂಘ: ಮಹಿಳಾ ವಿಭಾಗದಿಂದ ವಿಶೇಷ ಭಜನೆ 

11:34 AM Sep 06, 2017 | Team Udayavani |

ಮುಂಬಯಿ: ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ವತಿಯಿಂದ ಗಣೇಶೋತ್ಸವದ ಅಂಗವಾಗಿ ಮಹಿಳಾ ಸದಸ್ಯೆಯರಿಂದ ಹಾಗೂ ಸದಸ್ಯರಿಂದ ವಿಶೇಷ ಭಜನ ಕಾರ್ಯಕ್ರಮವು ಸೆ. 2ರಂದು ಕಾಂದಿವಲಿ ಪಶ್ಚಿಮದ ಪೊಯಿಸಾರ್‌ ಜಿಮಾVನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

Advertisement

ಸಂಜೆ 4ರಿಂದ ಪ್ರಾರಂಭಗೊಂಡ ಧಾರ್ಮಿಕ ಭಜನ ಕಾರ್ಯಕ್ರಮವನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಾ ಎಸ್‌. ಶೆಟ್ಟಿ ಅವರು ಉದ್ಘಾಟಿಸಿದರು. ಅನಂತರ ಮಹಿಳಾ ವಿಭಾಗದವರಿಂದ ಸುಮಾರು ಮೂರು ಗಂಟೆಗಳ ಕಾಲ ಭಜನ ಕಾರ್ಯಕ್ರಮ ನೆರವೇರಿತು. ಸಂಘದ ಸದಸ್ಯ ಬಾಂಧವರು ಭಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಾ ಮಂಗಳಾರತಿಯೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು. ಮಹಿಳೆಯರು ಗಣಪತಿಗೆ ಮಹಾಮಂಗಳಾರತಿಗೈದರು.

ಕೊನೆಯಲ್ಲಿ ಪ್ರಸಾದ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಜಿ. ಟಿ. ಪೂಜಾರಿ, ಉಪಾಧ್ಯಕ್ಷ ಪ್ರೇಮನಾಥ್‌ ಕೋಟ್ಯಾನ್‌, ಜತೆ ಕಾರ್ಯದರ್ಶಿ ಉಮೇಶ್‌ ಸುರತ್ಕಲ್‌, ಸಬಿತಾ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಸುಂದರ ಎಸ್‌. ಶೆಟ್ಟಿ, ಮಾಜಿ ಅಧ್ಯಕ್ಷ ಶ್ಯಾಮರಾಜ್‌ ಶೆಟ್ಟಿ, ಕೃಷ್ಣ ಉದ್ಯಾವರ್‌, ವಾರಿಜಾ ಎಸ್‌. ಕರ್ಕೇರ, ಗೀತಾ ಜೆ. ಶೆಟ್ಟಿ, ಜಯಶ್ರೀ ಆಳ್ವ, ಕಾಂತಿ ಶೆಟ್ಟಿಗಾರ್‌, ಉಪ ಕಾರ್ಯಾಧ್ಯಕ್ಷೆ ಯಶೋಧಾ ಎಸ್‌. ಶೆಟ್ಟಿ, ಸಲಹೆಗಾರ ಮಂಜಯ್ಯ ಸಿ. ಅಮೀನ್‌, ಹಿನ್ನೆಲೆ ಗಾಯನದಲ್ಲಿ ವಾಸು ಪೂಜಾರಿ ಮತ್ತು ಬಳಗದವರು ಸಹಕರಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next