Advertisement

Kanakapura ಹಾಡಹಗಲೇ ವಿದ್ಯಾರ್ಥಿನಿ ಕಿಡ್ನ್ಯಾಪ್ ಕೇಸ್: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

11:45 AM Aug 28, 2023 | Team Udayavani |

ರಾಮನಗರ: ಹಾಡಹಗಲೇ ನಡೆದ ವಿದ್ಯಾರ್ಥಿನಿಯ ಅಪಹರಣ ಪ್ರಕರಣವನ್ನು ರಾಮನಗರ ಪೊಲೀಸರು ಕೆಲವೇ ಗಂಟೆಗಳಲ್ಲಿ ಬೇಧಿಸಿದ್ದಾರೆ.

Advertisement

ಕನಕಪುರ ತಾಲೂಕಿನ ದಾಳಿಂಬಗ್ರಾಮದ ಚೇತನ್ ಬಂಧಿತ ಆರೋಪಿ. ಈತ ರಾಮನಗರದ ಸರ್ಕಾರಿ ಕಾಲೇಜು ಬಳಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಯನ್ನು ಚಾಕುವಿನಿಂದ ಹಲ್ಲೆ ಮಾಡಿ ಅಪಹರಣ ಮಾಡಿದ್ದ.

ಒಂದೇ ಊರಿನವರು: 16 ವರ್ಷ ಪ್ರಾಯದ ವಿದ್ಯಾರ್ಥಿನಿ ಬೆಳಗ್ಗೆ ಸಹಪಾಠಿಯೊಂದಿಗೆ ಕಾಲೇಜಿಗೆ ಬರುತ್ತಿರುವಾಗ ಇನ್ನೋವಾ ಕಾರಿನಲ್ಲಿ ಬಂದ ಆರೋಪಿ ಚೇತನ್ ಆಕೆಯ ಚುಚ್ಚಿ ಅಪಹರಣ ಮಾಡಿದ್ದ. ಆಕೆಯ ಕೈ ಹಾಗೂ ಭುಜದ ಭಾಗಕ್ಕೆ ಚಾಕುವಿನಿಂದ ಇರಿದು ಬಳಿಕ ಕಾರಿನಲ್ಲಿರಿಸಿ ಅಪಹರಣ ಮಾಡಿದ್ದ.

ಆರೋಪಿ ಮತ್ತು ವಿದ್ಯಾರ್ಥಿನಿ ಒಂದೇ ಗ್ರಾಮದವರಾದವರು. ವಿದ್ಯಾರ್ಥಿನಿ ರಾಮನಗರದಲ್ಲಿ ಅಜ್ಜಿ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು.

Advertisement

ಸದ್ಯ ವಿದ್ಯಾರ್ಥಿನಿಗೆ ರಾಮಕೃಷ್ಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಂಧಿತ ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next