Advertisement

ನೀರಿನ ಅರವಟಿಗೆಗೆ ಚಾಲನೆ

12:48 PM May 11, 2020 | Naveen |

ಕಂಪ್ಲಿ: ಹೆಚ್ಚಾಗುತ್ತಿರುವ ಬಿಸಿಲಿನ ಬೇಗೆ ಹಾಗೂ ನಿರಂತರ ಲಾಕ್‌ ಡೌನ್‌ನಿಂದ ತೊಂದರೆಯಾಗುತ್ತಿರುವ ಸಾರ್ವಜನಿಕರು, ಕಾರ್ಮಿಕರಿಗೆ ಹಾಗೂ ರೈತರಿಗೆ ಅನುಕೂಲವಾಗಲಿ ಎಂದು ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಯಲ್ಲಮ್ಮ ಕ್ಯಾಂಪ್‌ನಲ್ಲಿ ಕರವೇ ( ಟಿ.ನಾರಾಯಣಗೌಡ ಬಣ) ತಾಲೂಕು ಯುವ ಘಟಕದವರು ಒಂದು ತಿಂಗಳ ಕಾಲ ಉಚಿತ ಮಜ್ಜಿಗೆ ಮತ್ತು ಕುಡಿಯುವ ನೀರಿನ ಅರವಟ್ಟಿಗೆ ಆರಂಭಿಸಿದರು.

Advertisement

ತಾಲೂಕು ಯುವ ಘಟಕದ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಮಾತನಾಡಿ, ರೈತರು, ಕೃಷಿ ಕಾರ್ಮಿಕರಿಗೆ ಬಿಸಿಲ ತಾಪ ನೀಗಿಸಲು ಉಚಿತ ಮಜ್ಜಿಗೆ ಮತ್ತು ಕುಡಿಯುವ ನೀರಿನ ಅರವಟಿಗೆ ಆರಂಭಿಸಲಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಇಟಗಿ ಬಸವರಾಜ ಗೌಡ ಮಜ್ಜಿಗೆ ಹಾಗೂ ನೀರಿನ ಅರವಟಿಗೆ ಉದ್ಘಾಟಿಸಿದರು. ವಿಜಯ ಮಹಾಂತೇಶ್‌, ಮುಖಂಡರಾದ ಕೆ.ಕುಮಾರಸ್ವಾಮಿ, ಬಿ.ವಿ.ಗೌಡ, ಬಳೆ ವೀರೇಶ್‌, ಬುರೆ ವೆಂಕಟೇಶಪ್ಪ, ಅಂಗಡಿ ವೀರೇಶ್‌, ಎಚ್‌.ಹುಲುಗಪ್ಪ, ಎಚ್‌. ರೇಣುಕಪ್ಪ, ಪಿ.ಶಂಭುಲಿಂಗ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next