Advertisement

ಕಮಲಾ ಮಿಲ್ಸ್‌ ದುರಂತ: 1 Above ಮೂವರು ಮಾಲಕರು ಕೊನೆಗೂ ಸೆರೆ

11:40 AM Jan 11, 2018 | Team Udayavani |

ಮುಂಬಯಿ : ಮುಂಬಯಿಯ ಲೋವರ್‌ ಪರೇಲ್‌ನಲ್ಲಿ  ಕಮಲಾ ಮಿಲ್ಸ್‌ ಆವರಣದಲ್ಲಿ  ಕಳೆದ ವರ್ಷ ಡಿ.29ರಂದು ತಡರಾತ್ರಿ 14 ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಭೀಕರ ಅಗ್ನಿ ದುರಂತದ ಮುಖ್ಯ ತಾಣವಾಗಿದ್ದ ಒನ್‌ ಅಬೌವ್‌ ರೆಸ್ಟೋರೆಂಟ್‌ನ ತಲೆಮರೆಸಿಕೊಂಡ ಮಾಲಕರಾದ ಜಿಗರ್‌ ಸಾಂಗ್ವಿ , ಕೃಪೇಶ್‌ ಸಾಂಗ್ವಿ  ಮತ್ತು ಅಭಿಜಿತ್‌  ಮಾನ್‌ಕರ್‌ ಅವರನ್ನು ಮುಂಬಯಿ ಪೊಲೀಸರು ಕೊನೆಗೂ  ಬಂಧಿಸಿದ್ದಾರೆ. 

Advertisement

ಕೊಲೆ ಅಲ್ಲದ ನರಹತ್ಯೆ ಆರೋಪದ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡ ಬಳಿಕ ಅಭಿಜಿತ್‌ ಮಾನ್‌ಕರ್‌ ಮತ್ತು ಆತನ ಪಾಲುದಾರ ಸಾಂಗ್ವಿಗಳು ಭೂಗತರಾಗಿದ್ದರು. 

ಇದಕ್ಕೆ  ಮೊದಲು ಮುಂಬಯಿ ಪೊಲೀಸರು ಕಮಲಾ ಮಿಲ್ಸ್‌ ಆವರಣದಲ್ಲಿದ್ದ ಇನ್ನೊಂದು ಪಬ್‌, ‘ದಿ ಮೋಜೋಸ್‌ ಬಿಸ್ಟ್ರೋ’ ಸಹ ಮಾಲಕನಾಗಿರುವ ಡಿಜಿಪಿ ಮಟ್ಟದ ನಿವೃತ್ತ ಐಪಿಸಿ ಅಧಿಕಾರಿಯ ಪುತ್ರನಾಗಿರುವ ಯುಗ್‌ ಕೆ ಪಾಠಕ್‌ ನನ್ನು ಕಳೆದ ಶನಿವಾರ ಬಂಧಿಸಿದ್ದರು. 

ಪಾಠಕ್‌ನನ್ನು ಬಂಧಿಸುವ ಮುನ್ನ ಪೊಲೀಸರು ಒನ್‌ ಅಬೌವ್‌ ಪಬ್‌ ನ ಇಬ್ಬರು ಮ್ಯಾನೇಜರ್‌ಗಳಾದ ಕೆವಿನ್‌ ಬಾವಾ ಮತ್ತು ಲಿಸ್‌ಬನ್‌ ಲೋಪೆಜ್‌ ಅವರನ್ನು ಅಗ್ನಿ ಅನಾಹುತ ದುರಂತಕ್ಕೆ ಸಂಬಂಧಿಸಿ ಬಂಧಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next