Advertisement

ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ:ನಟ, ರಾಜಕಾರಣಿ ಕಮಲ್ ಹಾಸನ್

09:51 AM May 14, 2019 | Sathish malya |

ಹೊಸದಿಲ್ಲಿ : ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ಯಾರು ಗೊತ್ತಾ ? ನಟ, ರಾಜಕಾರಣಿ ಕಮಲ ಹಾಸನ್‌ ಪ್ರಕಾರ ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದಿದ್ದ ನಾಥೂರಾಮ್‌ ಗೋಡ್ಸೆ.

Advertisement

ತನ್ನ ಕ್ಷೇತ್ರದಲ್ಲಿರುವ ಮುಸ್ಲಿಮರ ತುಷ್ಟೀಕರಣಕ್ಕಾಗಿ ತಾನು ಈ ಮಾತನ್ನು ಹೇಳುತ್ತಿಲ್ಲ ಎಂಬ ಸ್ಪಷ್ಟನೆಯನ್ನು ಕೂಡ ಕಮಲ ಹಾಸನ್‌ ಇದರೊಂದಿಗೆ ಸೇರಿಸಿದ್ದಾರೆ !

ಇದೇ ಮೇ 19ರಂದು ಅರವಕುರುಚ್ಚಿ ವಿಧಾನ ಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ತನ್ನ ನೂತನ ಎಂಎನ್‌ಎಂ ಪಕ್ಷದ ಅಭ್ಯರ್ಥಿ ಪರ ನಡೆಸಲಾದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕಮಲ ಹಾಸನ್‌ ಭಾಷಣ ಮಾತನಾಡುತ್ತಿದ್ದ ರು.

“ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ ನಾಥೂರಾಮ್‌ ಗೋಡ್ಸೆ ಎಂದು ನಾನಿಲ್ಲಿ ಗಾಂಧಿ ಪ್ರತಿಮೆಯ ಎದುರು ನಿಂತು ಹೇಳುತ್ತಿದ್ದೇನೆ. ಇದೇನೂ ಚುನಾವಣಾ ಗಿಮಿಕ್‌ ಅಲ್ಲ; ಅಥವಾ ಈ ಕ್ಷೇತ್ರದಲ್ಲಿರುವ ಗಣನೀಯ ಸಂಖ್ಯೆಯ ಮುಸ್ಲಿಮ್‌ ಬಾಂಧವರನ್ನು ಖುಷಿ ಪಡಿಸಲೂ ಅಲ್ಲ’ ಎಂದು ಕಮಲ ಹಾಸನ್‌ ಹೇಳಿದರು.

“ನಾನು ನನ್ನ ಆತ್ಮಸಾಕ್ಷಿಯಲ್ಲಿ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗನಾಗಿದ್ದೇನೆ. ನನ್ನ ಮುತ್ತಾತನ ಕೊಲೆಯನ್ನು ಇಂದು ನಾನಿಲ್ಲಿ ಪ್ರಶ್ನಿಸುತ್ತಿದ್ದೇನೆ; ನೀವು ಕೂಡ ಇದನ್ನು ದಯವಿಟ್ಟು ಆ ಅರ್ಥದಲ್ಲೇ ತಿಳಿಯಿರಿ ‘ ಎಂದು ಕಮಲ ಹಾಸನ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next