Advertisement

ಕಾವೇರಿ ವ್ಯವಸ್ಥಾಪನ ಮಂಡಳಿ ರಚಿಸಿ: ಪ್ರಧಾನಿಗೆ ಕಮಲ ಹಾಸನ್‌ ಆಗ್ರಹ

05:45 PM Mar 29, 2018 | Team Udayavani |

ಚೆನ್ನೈ : “ಆದಷ್ಟು ಬೇಗನೆ ಕಾವೇರಿ ವ್ಯವಸ್ಥಾಪನ ಮಂಡಳಿಯನ್ನು ರಚಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿರಿಯ ನಟ ಹಾಗೂ ಮಕ್ಕಳ್‌ ನೀದಿ ಮಯ್ಯಮ್‌ ಪಕ್ಷದ ಸ್ಥಾಪಕ ಅಧ್ಯಕ್ಷರಾಗಿರುವ ಕಮಲ ಹಾಸನ್‌ ಒತ್ತಾಯಿಸಿದ್ದಾರೆ.

Advertisement

ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕಮಲ ಹಾಸನ್‌, “ಪ್ರಧಾನಿ ಮೋದಿಯವರೇ, ನಿಮಗೆ ಅಧಿಕಾರವಿದೆ, ದಯವಿಟ್ಟು ಆದಷ್ಟು ಬೇಗನೆ ಕಾವೇರಿ ವ್ಯವಸ್ಥಾಪನ ಮಂಡಳಿಯನ್ನು ರಚಿಸಿ’ ಎಂದು ಕೋರಿದರು. 

‘ತಮಿಳು ನಾಡು ಜನರಿಗೆ ಮತ್ತು ರೈತರಿಗೆ ನೀರಿನ ಅಗತ್ಯವಿದೆ. ಆದುದರಿಂದ ಕಾವೇರಿ ವ್ಯವಸ್ಥಾಪನ ಮಂಡಳಿಯನ್ನು ಪ್ರಧಾನಿ ಮೋದಿ ರಚಿಸಬೇಕು. ಇದು ತುಂಬ ಸರಳ ಮತ್ತು ಪ್ರಾಥಮಿಕ ಅಗತ್ಯವಾಗಿದೆ’ ಎಂದು ಕಮಲ ಹಾಸನ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next