Advertisement

ತಾಂಬಾದಲ್ಲಿ ಕಾಮದಹನ

03:38 PM Mar 02, 2018 | |

ತಾಂಬಾ: ಗ್ರಾಮದ ಕನಕ ನಗರ ಸೇರಿದಂತೆ ಪ್ರತಿ ಬಡಾವಣೆಯಲ್ಲಿ ಗುರುವಾರ ರಾತ್ರಿ ಕಾಮದಹನ ಮಾಡಲಾಯಿತು. ಪ್ರತಿ ಓಣಿಗಳಲ್ಲಿ ಹುಣ್ಣಿಮೆಗೂ ಮುಂಚೆ ಐದು ದಿನ ಕಾಮಣ್ಣನ ಹುಂಡಿ ತೋಡಿ ಪುಟ್ಟ ದೀಪ ಹಚ್ಚಿಟ್ಟು ಸುತ್ತಲ ಪ್ರದೇಶ ಸ್ವತ್ಛಗೊಳಿಸಿ ಅಲ್ಲೊಂದು ಚಂದದ ರಂಗೋಲಿ ಬಿಡಿಸಿ ಪ್ರೀತಿಯಿಂದ ಅಲಂಕರಿಸಿದ ಕಾಮಣ್ಣನಿಗೆ ವಿದಾಯ ಹೆಳಲು ಸಜ್ಜಾಗಿದ್ದ ಹುಡಗರು ಓಣಿಯ ಪ್ರತಿಯೊಂದು ಮನೆಯಿಂದ ಚಂದಾ ಸಂಗ್ರಹಿಸಿ ಮಾರುಕಟ್ಟೆಯಿಂದ ತಳಿರು ತೋರಣ, ಪರಪರಿ, ಕಬ್ಬು, ಬಾಳೆ ಗಿಡ, ತೆಂಗಿನ ಗರಿ ತಂದು ಓಣಿಯನ್ನು ಸಿಂಗರಿಸಿದ್ದರು. ರಾತ್ರಿ ವೇಳೆ ಕಳುವು ಮಾಡಿದ ಕುಳ್ಳು ಕಟ್ಟಿಗೆಯನ್ನು ಅಚ್ಚುಕಟ್ಟಾಗಿ ಒಟ್ಟಿ ಹೋಳಿಗೆ ನೈವೇದ್ಯ ಅರ್ಪಿಸಿ ಭಕ್ತಿಯಿಂದ ಕಾಯಿ ಕರ್ಪೂರ ಅರ್ಪಿಸಿದರು.

Advertisement

ಸಂಪ್ರದಾಯದಂತೆ ಹಾಲಮತ ಸಮಾಜದ ಮುಖಂಡರು ಹಾಗೂ ಗ್ರಾಮದ ಗೌಡರೆನಿಸಿಕೊಂಡ ಮನೆತನದವರು ಅಂಬೇಡ್ಕರ್‌ ನಗರದಲ್ಲಿ ಎಸ್‌ಸಿ ಜನಾಂಗದವರು ಒಟ್ಟಿಟ್ಟ ಕಟ್ಟಿಗೆಗಳಿಗೆ ಬೆಂಕಿಯಿಡಲು ಭಾಜಾ ಭಜಂತ್ರಿ ಮೂಲಕ ಗೌಡರನ್ನು ಕರೆದುಕೊಂಡು ಹೊಗಿ ಕೊಳ್ಳಿ ಇಡಿಸಿದರು.

ಅದನ್ನು ಹಾಲಮತ ಸಮಾಜದವರು ಅಲ್ಲಿಂದ ಕೊಳ್ಳಿಯನ್ನು ತಂದು ಮಹಾಲಕ್ಷ್ಮೀ ದೇವಸ್ಥಾನದ ಮುಂದೆ ಒಟ್ಟಿರುವ ಕಟ್ಟಿಗೆಗಳಿಗೆ ಕೊಳ್ಳಿಯಿಟ್ಟು ಕಾಮಣ್ಣನ ಸುತ್ತಲೂ ಸುತ್ತು ತಿರುಗಿ ಬೊಬ್ಬೆ ಇಟ್ಟು ಕಾಮಣ್ಣನಿಗೆ ವಿದಾಯ ಹೇಳಿದರು 

Advertisement

Udayavani is now on Telegram. Click here to join our channel and stay updated with the latest news.

Next