Advertisement

ಕಲ್ಸಂಕ ಸೇತುವೆ ವಿಸ್ತರಣೆ ಕಾಮಗಾರಿ ಪುನರಾರಂಭ 

03:10 AM Dec 13, 2018 | Team Udayavani |

ಉಡುಪಿ: ವಾಹನಗಳ ನಿಬಿಡತೆಯಿಂದ ಕೂಡಿರುವ ಉಡುಪಿಯ ಕಲ್ಸಂಕ ಜಂಕ್ಷನ್‌ನ ಕಲ್ಸಂಕ ಸೇತುವೆ ವಿಸ್ತರಣೆ ಕಾಮಗಾರಿ ಮತ್ತೆ ಆರಂಭಗೊಂಡಿದೆ. ಕಲ್ಸಂಕ ತೋಡಿನ ಇಕ್ಕೆಲಗಳಲ್ಲಿ ಗೋಡೆ ನಿರ್ಮಿಸಿ ಸ್ಲ್ಯಾಬ್‌ ಅಳವಡಿಸುವ ಕಾಮಗಾರಿ ಕಳೆದ ಮಳೆಗಾಲದ ಆರಂಭದಲ್ಲಿ ಚಾಲನೆ ಪಡೆದುಕೊಂಡಿತ್ತು. ಆದರೆ ಮಳೆಯ ಕಾರಣ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕಾಮಗಾರಿ ಆರಂಭಿಸಲಾಗಿದೆ.

Advertisement

3 ತಿಂಗಳಲ್ಲಿ ಪೂರ್ಣ ನಿರೀಕ್ಷೆ  
ನಗರಸಭೆಯ ಒಟ್ಟು 75 ಲ.ರೂ. ಅನುದಾನದಲ್ಲಿ ನಡೆಯುವ ಈ ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ಈ ಹಿಂದೆಯೇ ಸಿಗ್ನಲ್‌ ಲೈಟ್‌ಗಳನ್ನು ಅಳವಡಿಸಲಾಗಿದ್ದು ಕಾಮಗಾರಿ ಪೂರ್ಣಗೊಂಡ ಬಳಿಕ ಸಿಗ್ನಲ್‌ ಲೈಟ್‌ಗಳು ಕೂಡ ಚಾಲನೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಅಂಬಾಗಿಲು ರಸ್ತೆಯಿಂದ ಬರುವ ವಾಹನಗಳು ಗೊಂದಲವಿಲ್ಲದೆ ಉಡುಪಿ ಸಿಟಿ ಬಸ್‌ನಿಲ್ದಾಣ, ಶ್ರೀಕೃಷ್ಣ ಮಠದ ರಾಜಾಂಗಣ ರಸ್ತೆ ಕಡೆಗೆ ಹೋಗಲು ಹಾಗೂ ಮಣಿಪಾಲ ಕಡೆಯಿಂದ ರಾಜಾಂಗಣ ರಸ್ತೆ ಕಡೆಗೆ ಹೋಗುವ ವಾಹನಗಳು ಮುಕ್ತವಾಗಿ ಸಂಚರಿಸಲು ಅನುಕೂಲವಾಗಲಿದೆ.

ನೀರಿನ ಪೈಪ್‌ಗೆ ಹಾನಿ, ದುರಸ್ತಿ
ಮಂಗಳವಾರ ರಾತ್ರಿ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್‌ಗೆ ಹಾನಿಯಾಗಿ ನೀರು ಪೋಲಾಯಿತು. ಬೆಳಗ್ಗೆ ಸರಿಪಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next