Advertisement

ಮಳೆಗಾಲಕ್ಕೆ ಮುನ್ನ ತೋಡು ರಿಪೇರಿ

07:50 AM May 17, 2018 | Team Udayavani |

ಉಡುಪಿ: ಉಡುಪಿ – ಮಣಿಪಾಲ ರಾ.ಹೆ. ಹಾದು ಹೋಗುವ ಕಲ್ಸಂಕ ಜಂಕ್ಷನ್‌ನಲ್ಲಿರುವ ಸೇತುವೆ ಕಾಮಗಾರಿಗೆ ನಗರಸಭೆಯಿಂದ ಅನುದಾನ ಮಂಜೂರಾಗಿದ್ದು, ಇದೀಗ ಮಳೆಯ ನೀರು ಸರಾಗವಾಗಿ ಹರಿದುಹೋಗಲು ತೋಡಿನಲ್ಲಿದ್ದ ಮಣ್ಣನ್ನು ಹಿಟಾಚಿ ಮೂಲಕ ಮೇಲಕ್ಕೆತ್ತಿ ಸರಾಗ ನೀರು ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

Advertisement

ನಗರಸಭೆ ಅನುದಾನದಡಿ ಕಲ್ಸಂಕ ಸೇತುವೆ ಕಾಮಗಾರಿಗೆ 75 ಲ.ರೂ. ಮಂಜೂರಾಗಿದ್ದು, ಕೆಮೂ¤ರು ಕೃಷ್ಣಮೂರ್ತಿ ಭಟ್‌ ಕಾಮಗಾರಿಯ ಗುತ್ತಿಗೆ ಪಡೆದಿದ್ದಾರೆ. ಅಂಬಾಗಿಲಿನಿಂದ ಬರುವ ವಾಹನಗಳಿಗೆ ನೇರವಾಗಿ ಕೃಷ್ಣಮಠಕ್ಕೆ ತೆರಳುವಂತೆ ಮತ್ತು ಮಣಿಪಾಲದಿಂದ ಬರುವ ವಾಹನಗಳಿಗೆ ಫ್ರೀ ಲೆಫ್ಟ್ (ಮುಕ್ತ ಎಡ ರಸ್ತೆ) ದೊರಕಬೇಕೆನ್ನುವ ಉದ್ಧೇಶದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 

ಇದ್ದ ಸ್ಥಳಾವಕಾಶದಲ್ಲಿಯೇ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನೆಲೆಯಲ್ಲಿ “ಕ್ಯೂ’ 
ಮಾದರಿಯಲ್ಲಿ ಸೇತುವೆ ನಿರ್ಮಿಸಲಾಗುವುದು. ಬಿಡುಗಡೆಗೊಂಡ 75 ಲ.ರೂ. ಕಾಮಗಾರಿಯನ್ನು ಮರು ವಿನ್ಯಾಸಗೊಳಿಸಿ ಇನ್ನಷ್ಟು ವ್ಯವಸ್ಥಿತವಾಗಿ ಸೇತುವೆ ನಿರ್ಮಿಸಲಾಗುವುದು. ಮಳೆಗಾಲ ಕಳೆದ ಆನಂತರವೇ ಸೇತುವೆ ಕಾಮಗಾರಿ ಆರಂಭಿಸಲಾಗುವುದೆಂದು ನಗರಸಭೆ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next