Advertisement

ಗೋವಾ ದುರುದ್ದೇಶ ಬಹಿರಂಗ: ಸುಪ್ರೀಂ ಗಮನಕ್ಕೆ ತನ್ನಿ

04:35 PM Mar 22, 2021 | Team Udayavani |

ಬೆಳಗಾವಿ: ಮಹದಾಯಿ ನೀರು ಹಂಚಿಕೆ ಸಂಬಂಧ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನೀರಾವರಿ ಇಲಾಖೆಗಳ ಅಧಿಕಾರಿಗಳ ಜಂಟಿ ಪರಿಶೀಲನಾ ಸಮಿತಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಬಳಿ ಕಳಸಾ ನಾಲಾ ಪ್ರದೇಶಕ್ಕೆ ಭೇಟಿ ನೀಡಿದಸಮಯದಲ್ಲಿ ನಡೆದ ಘಟನೆಗಳು ಗೋವಾದದುರುದ್ದೇಶವನ್ನು ಬಹಿರಂಗಗೊಳಿಸಿದ್ದು,ಇದನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಗಮನಕ್ಕೆ ತರಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಆಗ್ರಹಿಸಿದೆ.

Advertisement

ಈ ಸಂಬಂಧ ರಾಜ್ಯ ಸರಕಾರದ ಜಲಸಂಪನ್ಮೂಲ ಇಲಾಖೆಯ ಅತಿರಿಕ್ತ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್‌ ಅವರಿಗೆ ಪತ್ರಬರೆದಿರುವ ಜಿಲ್ಲಾ ಕನ್ನಡ ಸಂಘಟನೆಗಳಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು ಗೋವಾದ ದುರುದ್ದೇಶದ ಬಗ್ಗೆಕರ್ನಾಟಕ ಸರಕಾರ ನ್ಯಾಯಾಲಯದಗಮನಕ್ಕೆ ತರುವ ಅಗತ್ಯತೆ ಇದೆ ಎಂದು ಹೇಳಿದ್ದಾರೆ.

ಯೋಜನಾ ಪ್ರದೇಶದಲ್ಲಿ ನಿರ್ಮಿಸಿದ ತಡೆಗೋಡೆಯಲ್ಲಿ ಈ ಹಿಂದೆ ಉಂಟಾಗಿದ್ದಬಿರುಕುಗಳನ್ನು ಮುಚ್ಚಲಾಗಿತ್ತು. ಈಬಿರುಕುಗಳು ಮತ್ತೆ ತೆರೆದುಕೊಂಡಿವೆಯೇಎಂಬುದನ್ನು ಪರಿಶೀಲಿಸಲು ಸರ್ವೋತ್ಛನ್ಯಾಯಾಲಯ ಆದೇಶಿಸಿತ್ತು. ಅದರಂತೆಮೂರು ರಾಜ್ಯಗಳ ಜಂಟಿ ಪರಿಶೀಲನಾಸಮಿತಿಯು ಮಾ.19 ರಂದು ಕಳಸಾ ನಾಲಾಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಆದರೆ ಈ ಸಂದರ್ಭದಲ್ಲಿ ಗೋವಾದಅಧಿಕಾರಿಗಳು ತಮ್ಮ ಜತೆ ಪರಿಸರವಾದಿಗಳುಮತ್ತು ಮಾಧ್ಯಮ ಪ್ರತಿನಿಧಿಗಳನ್ನುಕರೆತಂದಿದ್ದರು. ಉದ್ದೇಶಪೂರ್ವಕವಾಗಿಯೇಕರ್ನಾಟಕದ ಪೊಲೀಸರ ಜತೆ ವಾದಕ್ಕಿಳಿದರು.ಅಷ್ಟೇ ಅಲ್ಲ ವಾಸ್ತವತೆಯ ಆಧಾರದ ಮೇಲೆವರದಿ ತಯಾರಿಸಲು ಸಹ ಸಿದ್ಧರಾಗಲಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.ಸರ್ವೋತ್ಛ ನ್ಯಾಯಾಲಯದ ಆದೇಶದನ್ವಯ ನಿರ್ಮಿಸಲಾದ ತಡೆಗೋಡೆಯುಭದ್ರವಾಗಿದೆ ಎಂಬ ವಾಸ್ತವವನ್ನು ಕಂಡರೂಅದನ್ನು ವರದಿಯಲ್ಲಿ ಪ್ರಸ್ತಾಪಿಸಲು ಸಿದ್ಧರಾಗದ ಗೋವಾ ಅಧಿಕಾರಿಗಳು ಹಾಗೆಯೇ ಮರಳಿ ಹೋಗಿದ್ದಾರೆ. ಜತೆಗೆಮಾಧ್ಯಮಗಳಲ್ಲಿ ಕರ್ನಾಟಕದ ವಿರುದ್ಧ ವರದಿ ಪ್ರಕಟವಾಗುವಂತೆ ಮಾಡಿದ್ದಾರೆ ಎಂದು ಅಶೋಕ ಚಂದರಗಿ ಪತ್ರದಲ್ಲಿ ತಿಳಿಸಿದ್ದಾರೆ.

ಕಳಸಾ ಬಂಡೂರಿ ಯೋಜನೆಯಅನುಷ್ಠಾನವನ್ನು ತಡೆಯುವ ಪ್ರಯತ್ನವಾಗಿವಿಳಂಬ ತಂತ್ರವನ್ನು ಅನುಸರಿಸುತ್ತಿರುವ ಗೋವಾ ತನ್ನ ತಂತ್ರಕ್ಕಾಗಿ ಸರ್ವೋತ್ಛನ್ಯಾಯಾಲಯದ ಅಮೂಲ್ಯ ಸಮಯ ಹಾಳುಮಾಡುತ್ತಿದೆ. ಕಾರಣ ಈ ವಿಷಯವನ್ನು ರಾಜ್ಯ ಸರಕಾರ ಏಪ್ರಿಲ್‌ ಮೊದಲ ವಾರದಲ್ಲಿ ನಡೆಯುವ ವಿಚಾರಣೆ ಕಾಲಕ್ಕೆನ್ಯಾಯಾಲಯದ ಗಮನಕ್ಕೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.

Advertisement

2010 ರಿಂದ 2018 ರವರೆಗೆ ಮಹದಾಯಿ ನ್ಯಾಯಮಂಡಳಿ ವಿಚಾರಣೆ ಕಾಲಕ್ಕೆ ಗೋವಾಸರಕಾರ ಇದೇ ರೀತಿ ವಿಳಂಬ ತಂತ್ರವನ್ನುಅನುಸರಿಸಿದ್ದಲ್ಲದೆ ನ್ಯಾಯಾಲಯ ಮತ್ತುಕೇಂದ್ರ ಸರಕಾರವನ್ನು ಬಳಸಿಕೊಂಡುಯೋಜನೆಯ ಅನುಷ್ಠಾನಕ್ಕೆ ತಡೆಯಲು ಪ್ರಯತ್ನ ಮಾಡಿತ್ತು.

ಇದರ ಹೊರತಾಗಿ ಜಂಟಿ ಪರಿಶೀಲನಾಸಮಿತಿಯು ವಾಸ್ತವ ಪರಿಸ್ಥಿತಿಯನ್ನುನ್ಯಾಯಾಲಯದ ಗಮನಕ್ಕೆ ತರಲುವಿಫಲವಾದರೆ ಸರ್ವೋತ್ಛ ನ್ಯಾಯಾಲಯವು ತನ್ನದೇ ಅದ ಅಧಿಕಾರಿಗಳನ್ನು ಯೋಜನಾ ಪ್ರದೇಶಕ್ಕೆ ಕಳಿಸುವಂತೆ ಕರ್ನಾಟಕ ಸರಕಾರ ಮನವಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next