Advertisement

ಕೃಷಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಗೆ ಆಗ್ರಹ

11:51 AM May 07, 2020 | Naveen |

ಕಲಬುರಗಿ: ಕೃಷಿ ಕಾರ್ಮಿಕರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಕೃಷಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸುವಂತೆ ರೈತ-ಕೃಷಿಕಾರ್ಮಿಕರ ಸಂಘಟನೆ (ಆರ್‌ಕೆಎಸ್‌) ಆಗ್ರಹಿಸಿದೆ. ಅದೇ ರೀತಿ ಮೈಕ್ರೊ ಫೈನಾನ್ಸ್‌ಗಳು ಸೇರಿದಂತೆ ಬ್ಯಾಂಕು ಹಾಗೂ ಎಲ್ಲ ಸಾಲಗಳನ್ನು ಮನ್ನಾ ಮಾಡುವುದು, ಬಡ ಹಾಗೂ ಮಧ್ಯಮ ರೈತರಿಗೆ ಅಗತ್ಯವಿರುವಷ್ಟು ಬಡ್ಡಿರಹಿತ ದೀರ್ಘಾವಧಿ ಸಾಲ ನೀಡಬೇಕು. ಈ ವರ್ಷದ ಬೆಳೆಗೆ ಅಗತ್ಯವಾದ ಬೀಜ, ಗೊಬ್ಬರ, ಕೀಟನಾಶಕಗಳನ್ನು ಉಚಿತವಾಗಿ ನೀಡಬೇಕು. ಕೃಷಿ ಉತ್ಪನ್ನಗಳನ್ನು ಖರೀದಿಸಲು ಸಮರ್ಪಕ ವ್ಯವಸ್ಥೆ ಮಾಡಬೇಕು, ಉತ್ತಮ ಬೆಲೆ ನೀಡಬೇಕು ಎಂದು ಆಗ್ರಹಿಸಿದೆ.

Advertisement

ನರೇಗಾ ಯೋಜನೆಯಲ್ಲಿ ಕೃಷಿಕಾರ್ಮಿಕರಿಗೆ ಕನಿಷ್ಠ 200 ದಿನಗಳ ಕಾಲ ಕೆಲಸ ಕೊಡಬೇಕು, ಕೂಡಲೇ ವೇತನ ಪಾವತಿಸಬೇಕು. ದಿನಕ್ಕೆ ಕನಿಷ್ಠ 600ರೂ. ವೇತನ ನಿಗದಿಪಡಿಸಬೇಕು. ವಲಸೆ ಕಾರ್ಮಿಕರಿಗೆ ಕೂಡಲೇ ಊಟ, ವಸತಿ, ವೈದ್ಯಕೀಯ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು. ಮದ್ಯಪಾನಕ್ಕೆ ಅನುಮತಿ ನೀಡಿರುವುದನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಸಂಘಟನೆಯ ಗಣಪತರಾವ್‌ ಮಾನೆ, ಮಹೇಶ ಎಸ್‌.ಟಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next