Advertisement

ಲಾಕ್‌ಡೌನ್‌ ಸಡಿಲ: ಅಕ್ರಮ ಮರಳುಗಾರಿಕೆ ಶುರು

11:48 AM May 08, 2020 | Naveen |

ಕಲಬುರಗಿ: ಕೋವಿಡ್ ಹಾವಳಿಯಿಂದ ಎದುರಾದ ಲಾಕ್‌ಡೌನ್‌ದಿಂದ ಕಳೆದ ಒಂದೂವರೆ ತಿಂಗಳಿನಿಂದ ಸ್ಥಗಿತವಾಗಿದ್ದ ಮರಳುಗಾರಿಕೆ ಲಾಕ್‌ಡೌನ್‌ ಸರಳೀಕರಣಗೊಂಡ ನಂತರ ಮತ್ತೆ ಶುರುವಾಗಿದ್ದು, ಅಕ್ರಮ ದಂಧೆಕೋರರ ಹಾವಳಿಯೂ ಮತ್ತೆ ಆರಂಭವಾಗಿದೆ.

Advertisement

ಭೀಮಾ ನದಿಯಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಮೆಲ್ಲಗೆ ಅಕ್ರಮ ಮರಳುಗಾರಿಕೆ ಪ್ರಾರಂಭವಾಗಿದೆ. ಅಫ‌ಜಲಪುರ ತಾಲೂಕಿನ ಭೀಮಾ ನದಿಯುದ್ದಕ್ಕೂ ಕೆಲವೆಡೆ ಬೋಟ್‌ ಹಾಗೂ ಜೆಸಿಬಿ ಬಳಸಿ ಮರಳು ಎತ್ತುವ ದಂಧೆ ಪ್ರಾರಂಭವಾಗಿದೆ. ನದಿ ತೀರದ ಕಿರಸಾವಳಗಿ ಬಳಿ ಅಕ್ರಮ ಮರಳು ನಡೆಯುತ್ತಿದೆ ಎಂದು ಸಾರ್ವಜನಿಕರು ಮೇಲಿಂದ ಮೇಲೆ ನೀಡಿದ ದೂರನ್ನು ಆಲಿಸಿ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಆದರೆ ಮರಳು ದಂಧೆಕೋರರು ಅಧಿಕಾರಿಗಳು ಬರುವ ಸ್ವಲ್ಪ ಹೊತ್ತಿನ ಮುಂಚೆಯೇ ಜಾಗ ಖಾಲಿ ಮಾಡಿದ್ದಾರೆ. ಅಕ್ರಮ ಮರಳುಗಾರಿಕೆ ಕುರಿತಾಗಿ ಕಂದಾಯ, ಪೊಲೀಸ್‌ ಅಧಿಕಾರಿಗಳನ್ನು ಕೇಳಿದರೆ ಒಬ್ಬರಿಗೊಬ್ಬರ ಮೇಲೆ ಹಾಕಿ ಜಾರಿಗೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next