Advertisement

ನರೇಗಾದಡಿ ಬದು ನಿರ್ಮಾಣಕ್ಕೆ ಚಾಲನೆ

05:44 PM May 21, 2020 | Naveen |

ಕಲಬುರಗಿ: ಹೊಲದಲ್ಲಿನ ಮಣ್ಣು ಮಳೆ ನೀರಿನ ಜತೆ ಹರಿದು ಹೋಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಬದು ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.

Advertisement

ಕಲಬುರಗಿ ಗ್ರಾಮೀಣ ಕ್ಷೇತ್ರದ ಕುಸನೂರು ತಾಂಡಾ ಹಾಗೂ ಇತರೆಡೆ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಹಿಂದೆ ಹೊಲದಲ್ಲಿನ ಸಣ್ಣ-ಸಣ್ಣ ಕಲ್ಲುಗಳನ್ನು ಆಯುವುದರ ಮೂಲಕ ಹೊಲ ಸ್ವತ್ಛಗೊಳಿಸುವ ಕಾರ್ಯವನ್ನು ಉದ್ಯೋಗ ಖಾತ್ರಿ ಯೋಜನೆ ಅಡಿ ಕೈಗೊಳ್ಳಲಾಗಿತ್ತು. ಈಗ ಬದು ನಿರ್ಮಾಣ ಕಾರ್ಯ ಅಭಿಯಾನ ಎನ್ನುವಂತೆ ಕೈಗೊಳ್ಳಲಾಗಿದೆ ಎಂದರು.

ಇದೇ ವೇಳೆ ಕುಸನೂರು, ನಂದೂರ ಕೆ, ನಂದೂರ ಬಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಶಾಸಕರು ಕಾರ್ಮಿಕರಿಗೆ ದಿನಸಿ ಕಿಟ್‌ ಹಾಗೂ ಮಾಸ್ಕ್ ವಿತರಿಸಿದರು. ಮುಖಂಡರಾದ ಮಲ್ಲಯ್ಯ ಸ್ವಾಮಿ, ತಾಪಂ ಸದಸ್ಯೆ ವಿಜಯಲಕ್ಷ್ಮೀ ಬಬಲಾದ, ಕುಸನೂರ ಗ್ರಾಪಂ ಅಧ್ಯಕ್ಷ ದಯಾನಂದ ಸಪ್ಪನ, ಜೀತೇಂದ್ರ ರಾಠೊಡ, ಶಿವಕುಮಾರ ಗುತ್ತೇದಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next