Advertisement

ಧಾರ್ಮಿಕ ಪ್ರಚೋದನೆ: ಬಿಜೆಪಿ ಸಂಸದೆ ವಿರುದ್ಧ ನೀತಿ ಸಂಹಿತೆ ಕೇಸ್‌

11:22 AM May 26, 2018 | udayavani editorial |

ಮುಜಫ‌ರನಗರ : ಕೈರಾನಾ ಉಪಚುನಾವಣೆ ಸಂಬಂಧದ ತನ್ನ ಭಾಷಣದಲ್ಲಿ ಜನರಲ್ಲಿನ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಮೂಲಕ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಗೈದ ಆರೋಪದ ಮೇಲೆ ಬಿಜೆಪಿ ಸಂಸದೆ ಕಾಂತಾ ಕರ್ದಂ ವಿರುದ್ದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Advertisement

ಚುನಾವಣಾ ಆಯೋಗದ ನಿರ್ದೇಶದ ಪ್ರಕಾರ ಸಂಸದೆ ಕರ್ದಂ ವಿರುದ್ಧ ಕೇಸು ದಾಖಲಿಸಲಾಯಿತು ಎಂದು ನುಕುಡ್‌ ಪೊಲೀಸ್‌ ಠಾಣೆ ಎಸ್‌ಎಚ್‌ಓ ಯಶ್‌ಪಾಲ್‌ ಸಿಂಗ್‌ ತಿಳಿಸಿದ್ದಾರೆ.

ಸಹರಣಪುರ ಜಿಲ್ಲೆಯ ನುಕುದ್‌ ಪಟ್ಟಣದಲ್ಲಿನ ತಮ್ಮ ಸಾರ್ವಜನಿಕ ಭಾಷಣದಲ್ಲಿ ಕರ್ದಂ ಅವರು ಜನರನ್ನು ಧಾರ್ಮಿಕವಾಗಿ ಪ್ರಚೋದಿಸುವ ಭಾಷಣ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next