Advertisement

‘ಗಂಧದಗುಡಿ’ಚಿತ್ರದ ಪ್ರಚಾರಕ್ಕೆ ಇಳಿದ ಕಾಫಿನಾಡು ಚಂದ್ರು

01:46 PM Oct 27, 2022 | Team Udayavani |

ಚಿಕ್ಕಮಗಳೂರು : ದಿವಂಗತ ಪುನೀತ್ ರಾಜ್ ಕುಮಾರ್ ಅಭಿನಯದ ‘ಗಂಧದಗುಡಿ’ ಚಿತ್ರದ ಪ್ರಚಾರಕ್ಕೆ ಅವರ ಅಪ್ಪಟ ಅಭಿಮಾನಿ ಕಾಫಿನಾಡು ಚಂದ್ರು ಇಳಿದಿದ್ದು, ಚಿತ್ರ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಬೇಕು ಎಂದು ಕೇಳಿಕೊಂಡಿದ್ದಾರೆ.

Advertisement

ವಿಭಿನ್ನವಾಗಿ ಕ್ಷೌರ ಮಾಡಿಸಿಕೊಂಡು ತಲೆಯಲ್ಲಿ ‘ಗಂಧದ ಗುಡಿ’ ಎಂದು ಬರೆಸಿಕೊಂಡು ಚಿಕ್ಕಮಗಳೂರು ನಗರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಭಿನ್ನ ಶೈಲಿಯ ಹುಟ್ಟುಹಬ್ಬದ ಶುಭಾಶಯ ಕೋರುವ ಮೂಲಕ ಜನಪ್ರಿಯರಾಗಿರುವ ಚಂದ್ರು, ಪುನೀತ್ ಅಣ್ಣನ ಸಿನಿಮಾ ಹೊಸ ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದ್ದಾರೆ.

ಹಿಂದೆ ಶಿವಣ್ಣನ ‘ಓಂ’ ಚಿತ್ರ ಹೆಸರು ಮಾಡಿದಂತೆ ಈ ಚಿತ್ರವೂ ಸೂಪರ್ ಹಿಟ್ ಆಗಬೇಕು.ಇದು ಅಣ್ಣನ ಕೊನೆಯ ಚಿತ್ರ. ಅಣ್ಣ ಮೇಲಿನಿಂದ ನೋಡುತ್ತಾರೆ ಅವರಿಗೆ ಆನಂದ ಆಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next