Advertisement

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ

04:03 PM Jun 18, 2020 | Naveen |

ಕಡೂರು: ಜೂ. 25 ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು ಯಾವುದೇ ಸಮಸ್ಯೆಗಳು ಬಾರದಂತೆ ಈ ಬಾರಿ ಪರೀಕ್ಷೆಗಳು ನಡೆಯಲಿವೆ ಎಂದು ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥಸ್ವಾಮಿ ತಿಳಿಸಿದರು.

Advertisement

ಪಟ್ಟಣದ ಬಿಇಒ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಡೂರು ಶೈಕ್ಷಣಿಕ ವಲಯದ 1,230 ಬಾಲಕರು, 1,154 ಬಾಲಕಿಯರು ಒಟ್ಟು 2,384 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಗ್ರಾಮೀಣ ಪ್ರದೇಶವು ಸೇರಿದಂತೆ 10 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು. ಕೋವಿಡ್‌ -19 ನಿಂದ ಇತರೆ ಜಿಲ್ಲೆಯಿಂದ ವಲಸೆ ಬಂದ ಮಕ್ಕಳ ಸಂಖ್ಯೆ 116 ಇದ್ದು ನಮ್ಮಲ್ಲಿಂದ ವಲಸೆ ಹೋದ ಮಕ್ಕಳ ಸಂಖ್ಯೆ 81 ಇದೆ.

ಈಗಾಗಲೇ ಎಲ್ಲಾರಿಗೂ ಪರೀಕ್ಷಾ ಪ್ರವೇಶ ಪತ್ರ ನೀಡಲಾಗಿದ್ದು ಈ ಬಾರಿ ಕೋವಿಡ್ ವೈರಸ್‌ ಹರಡುವ ಭೀತಿಯಿಂದ 150 ಕ್ಕೂ ಹೆಚ್ಚಿನ ಕೊಠಡಿಗಳನ್ನು ಪಡೆಯಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next