Advertisement

Kadur; ಕ್ಷುಲ್ಲಕ ಕಾರಣಕ್ಕೆ ತಾಯಿಯನ್ನೇ ಹತ್ಯೆಗೈದ ಪುತ್ರ

08:37 PM Oct 01, 2023 | Team Udayavani |

ಕಡೂರು: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ತನ್ನ ತಾಯಿಯನ್ನೆ ಕೊಲೆ ಮಾಡಿದ ಘಟನೆ ತಾಲ್ಲೂಕಿನ ಕೆ.ಬಿದರೆ ಗ್ರಾಮದಲ್ಲಿ‌ ಶನಿವಾರ ತಡರಾತ್ರಿ ನಡೆದಿದೆ. ಕಮಲಮ್ಮ( 50) ಕೊಲೆಯಾದ ಮಹಿಳೆ. ಇವರ ಮಗ ಸಂತೋಷ್( 30) ನನ್ನು ಪಂಚನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಕುಡಿತಕ್ಕೆ ದಾಸನಾಗಿದ್ದ ಸಂತೋಷ ನಿತ್ಯ ತಂದೆ, ತಾಯಿಯೊಡನೆ ಜಗಳವಾಡುತ್ತಿದ್ದ. ನಿನ್ನೆಯೂ ಸಹ ತಾಯಿಯೊಡನೆ ಹಣಕ್ಕಾಗಿ ಪೀಡಿಸಿ ಜಗಳವಾಡಿದ್ದ. ಜಗಳ ತಾರಕಕ್ಕೆ ಹೋಗಿ ಸಂತೋಷ್ ಹರಿತವಾದ ಆಯುಧದಿಂದ ತಾಯಿಯನ್ನು ಹತ್ಯೆಗೈದಿದ್ದಾನೆ ಎಂದು ಸಂತೋಷ್ ತಂದೆ ಕಲ್ಲೇಶಪ್ಪ ಪೊಲೀಸ್ ದೂರು ನೀಡಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮ್ಟೆ ಭೇಟಿ ನೀಡಿದ್ದರು. ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next