Advertisement

ಗಾಯಗೊಂಡಿದ್ದ ಅಣ್ಣನ ಮಗನ ಆರೈಕೆ: ದ್ವೇಷದಿಂದ ಅಣ್ಣನ ಪತ್ನಿ, ಮಗಳಿಂದ ವ್ಯಕ್ತಿ ಮೇಲೆ ಹಲ್ಲೆ

09:52 AM Feb 22, 2023 | Team Udayavani |

ಕಡಬ: ತಾಲೂಕಿನ ಬೆಳಂದೂರು ಗ್ರಾಮದ ಅಮೈ ಎಂಬಲ್ಲಿ ತೋಟದಲ್ಲಿ ಅಡಿಕೆ ಮರಗಳಿಗೆ ನೀರು ಹಾಕುತ್ತಿದ್ದ ವ್ಯಕ್ತಿಯೊಬ್ಬರಿಗೆ ಅವರ ಅಣ್ಣನ ಪತ್ನಿ ಹಾಗೂ ಮಗಳು ಹಲ್ಲೆ ಮಾಡಿದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬೆಳಂದೂರು ಗ್ರಾಮದ ಅಮೈ ನಿವಾಸಿ ಧರ್ಮಪಾಲ ಎಂಬವರಿಗೆ ಅವರ ಅಣ್ಣ ಸುಂದರ ಗೌಡ ಎಂಬವರ ಪತ್ನಿ ಕೈಯಲ್ಲಿ ಕತ್ತಿ ಹಾಗೂ ಮಗಳು ಯಶೋಧಾ ದೊಣ್ಣೆಯಿಂದ ತಲೆಗೆ ಹೊಡೆದು ನೋವುಂಟು ಮಾಡಿದ್ದರು. ಆ ವೇಳೆ ಧರ್ಮಪಾಲ ಅಲ್ಲಿಂದ ಓಡಿದ್ದು, ಸ್ವಲ್ಪ ದೂರ ಹೋಗುವ ವೇಳೆ ಬೆನ್ನಟ್ಟಿಕೊಂಡು ಬಂದ ಯಶೋಧಾ ಧರ್ಮಪಾಲ ಅವರನ್ನು ದೂಡಿ ಹಾಕಿದ್ದರ ಪರಿಣಾಮ ನೆಲದಲ್ಲಿದ್ದ ಕಲ್ಲು ಮುಖಕ್ಕೆ ತಾಗಿ ಗುದ್ದಿ ನೋವುಂಟಾಗಿದೆ.

ಗಾಯಾಳು ಧರ್ಮಪಾಲ ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

ಈ ಕೃತ್ಯಕ್ಕೆ ಧರ್ಮಪಾಲ ಅವರ ಅಣ್ಣ ಸುಂದರ ಗೌಡರ ಮಗ ಕುಲದೀಪನಿಗೂ, 4 ಮಂದಿ ಹೆಣ್ಣು ಮಕ್ಕಳಿಗೂ ಮನೆ ಹಾಗೂ ಕೃಷಿ ಜಮೀನಿನ ಪಾಲಿನ ವಿಚಾರದಲ್ಲಿ ತಕರಾರಿದ್ದು, ಸುಮಾರು ಒಂದೂವರೆ ತಿಂಗಳ ಹಿಂದೆ ಕುಲದೀಪ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಮನೆಯಲ್ಲಿ ವಿಶ್ರಾಂತಿಯೊಂದಿಗೆ ಚಿಕಿತ್ಸೆಯಲ್ಲಿದ್ದು, ಧರ್ಮಪಾಲ ಅವರು ಗಾಯಾಳು ಕುಲದೀಪನ ಆರೈಕೆ ಮಾಡಲು ಆಗಾಗ ಮನೆಗೆ ಹೋಗುತ್ತಿದ್ದು, ಈ ಧ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next