Advertisement

ಬಂದ್ ಔಚಿತ್ಯ‌ ಏನಿತ್ತು: ಕರ್ನಾಟಕ ಬಂದ್ ಆಚರಣೆಗೆ‌ ಸಚಿವ ಡಾ.ಕೆ.ಸುಧಾಕರ್ ಕಿಡಿ

10:13 AM Feb 14, 2020 | keerthan |

ಚಿಕ್ಕಬಳ್ಳಾಪುರ: ಬೇಡಿಕೆಗಳನ್ನು‌ ಈಡೇರಿಸಲು ಸರ್ಕಾರ ಬದ್ದವಾಗಿದ್ದರೂ ಇಂದಿನ ಕರ್ನಾಟಕ ಬಂದ್ ಆಚರಿಸುವ ಔಚಿತ್ಯ ಏನಿತ್ತು? ಇದರಿಂದ ಸಮಾಜಕ್ಕೆ‌ ಹೊರೆ ಎಂದು‌ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

Advertisement

ಚಿಕ್ಕಬಳ್ಳಾಪುರ ತಾಲೂಕಿನ ತಾಂಡ್ರಮರದಹಳ್ಳಿ ಗ್ರಾಮದಲ್ಲಿ ಗುರುವಾರ ಅಮೃತ ಭವನ ಉದ್ಘಾಟಿಸಲು ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.

ಇಂದಿನ ಬಂದ್ ರಾಜಕೀಯ‌ ಕಾರಣಗಳಿಗೆ ಆಚರಿಸಲಾಗುತ್ತಿದೆ. ಇದರಿಂದ ಜನ ಸಾಮಾನ್ಯರಿಗೆ ಎಷ್ಟು ಕಷ್ಟ -ನಷ್ಟ ಅಗುತ್ತದೆ. ಅದೇ‌ ರೀತಿ ರೈತರಿಗೆ, ರೋಗಿಗಳಿಗೆ ತುಂಬಾ ತೊಂದರೆ‌ ಆಗುತ್ತದೆ. ಇದನ್ನು ಪ್ರಭುದ್ದ ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.

ಏನೇ ಸಮಸ್ಯೆ‌ ಇದ್ದರೂ ಸರ್ಕಾರ ಬಗೆಹರಿಸಲು ‌ಸಿದ್ದವಿದೆ ಎಂದರು. ಪದೇ ಪದೇ ಭಾರತ್ ಬಂದ್ ಮಾಡುವುದು, ಕರ್ನಾಟಕ ಬಂದ್ ಮಾಡುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next