Advertisement

ಗೋಮಾಂಸ ತಿನ್ನುತ್ತೇನೆ ಎಂದವರಿಗೆ ರಾಜ್ಯದ ಜನತೆ ಬೆಂಬಲ ನೀಡಿಲ್ಲ: ಈಶ್ವರಪ್ಪ

11:27 AM Dec 31, 2020 | Team Udayavani |

ಶಿವಮೊಗ್ಗ: ಗೋಮಾಂಸ ತಿನ್ನುತ್ತೀನಿ ನಾನು ನೀವು ಏನು ಮಾಡುತ್ತೀರಿ ಎನ್ನುವವರಿಗೆ ಗ್ರಾ.ಪಂ ಚುನಾವಣೆಯಲ್ಲಿ ರಾಜ್ಯದ ಜನ ಬೆಂಬಲ ಕೊಟ್ಟಿಲ್ಲ. ಗೋಮಾತೆ ಪೂಜಿಸುವವರಿಗೆ ಬೆಂಬಲ ಕೊಟ್ಟಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ಶಿವಮೊಗ್ಗದಲ್ಲಿ ಮಾತನಾಡಿದ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಚುನಾವಣೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಬೆಂಬಲ ಕೊಟ್ಟಿಲ್ಲ. ಹಿಂದೂಸ್ಥಾನ್ ಜಿಂದಾಬಾದ್ ಎನ್ನುವವರಿಗೆ ಬೆಂಬಲ ಕೊಟ್ಟಿದ್ದಾರೆ. ಹನುಮ ಜಯಂತಿ ದಿನ ಚಿಕನ್ ಸೇವಿಸುವವರಿಗೆ ಬೆಂಬಲ ಕೊಟ್ಟಿಲ್ಲ. ರಾಮನ ಭಕ್ತರಿಗೆ ಬೆಂಬಲ ಕೊಟ್ಟಿದ್ದಾರೆ ಎಂದರು.

ಸಿದ್ದರಾಮಯ್ಯ ಸಹ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದರು. ಸಿಎಂ ಮಾಡುತ್ತೇವೆ ಎಂದು ಆಸೆ ತೋರಿಸಿದ್ದಕ್ಕೆ ಬಂದರು. ನಿಮ್ಮ ಹಿಂಬಾಲಕರು ಸಹ ಅದೇ ರೀತಿ ಇದ್ದಾರೆ. ಸಂಘಟನೆ ಮಾಡಿ ಚುನಾವಣೆಗೆ ಬನ್ನಿ. ಸಂಘಟನೆ ಮಾಡದೇ ಚುನಾವಣೆಗೆ ಹೋದರೆ ಸೋಲನುಭವಿಸುತ್ತೀರಿ. ಸೋತು ನಂತರ ನಿಮ್ಮ ಪಕ್ಷದ ನಾಯಕರನ್ನೇ ಬೈಯುತ್ತಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ನಾಯಕತ್ವ ಸತ್ತು ಹೋಗಿದೆ. ಸಂಘಟನೆ, ನಾಯಕತ್ವ ಇದ್ದರೆ ಅತಿ ಹೆಚ್ಚು ಸ್ಥಾನ ಗೆಲ್ಲಬಹುದು ಎಂಬುದಕ್ಕೆ ಗ್ರಾಮ ಪಂಚಾಯತಿ ಫಲಿತಾಂಶವೇ ಸಾಕ್ಷಿ. ಈ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅತಿ ಹೆಚ್ಚು ಸ್ಥಾನ ಗೆದ್ದಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next