Advertisement

ಅಫ್ಘಾನ್ ನಲ್ಲಿ ನಡೆಯುತ್ತಿರುವ ಘಟನೆಗಳು ಮನುಷ್ಯರು ತಲೆತಗ್ಗಿಸುವಂತಿದೆ: ಈಶ್ವರಪ್ಪ

10:21 AM Aug 21, 2021 | keerthan |

ಶಿವಮೊಗ್ಗ: ಅಫ್ಘಾನಿಸ್ತಾ‌ನದಲ್ಲಿ ಹೆಣ್ಣುಮಕ್ಕಳನ್ನು ಎತ್ತಿಕೊಂಡು ಅತ್ಯಾಚಾರ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ನೋಡಿದಾಗ ಪ್ರಪಂಚದಲ್ಲಿ ಮಾನವೀಯತೆ ಇಲ್ಲವೇನೋ ಎನ್ನುವಂತಿದೆ. ಈ ರೀತಿಯ ಘಟನೆಗಳು ಮನುಷ್ಯರು ತಲೆತಗ್ಗಿಸುವಂತಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಎಲ್ಲದೂ ಕೆಟ್ಟದೆ. ಮನುಷತ್ವವೂ ಇಲ್ಲದೆ ‌ನಡೆಯುತ್ತಿರುವ ಚಟುವಟಿಕೆಗಳನ್ನು ಯಾವೊಬ್ಬ ನಾಗರಿಕನೂ ಬೆಂಬಲಿಸಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ:ಕೋವಿಡ್ ನಿಯಮ ಗಾಳಿಗೆ ತೂರಿದ ಜೋಗ ಜಲಪಾತದ ಏಳು ಮಂದಿ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲು

ಅಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿ ನಮ್ಮ ದೇಶದಲ್ಲಿ ನಾವು ಏನು ಒಳ್ಳೆಯದು ಮಾಡಬೇಕು ಎಂದು ತೀರ್ಮಾನಿಸಬೇಕು. ನಮ್ಮ ದೇಶದಲ್ಲಿ ಕೆಲವರು ವಿಚಾರವಾದಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ.  ನಮ್ಮ ದೇಶದಲ್ಲಿ ಶಾಂತಿಪ್ರಿಯತೆ, ಧರ್ಮ ಸಹಿಷ್ಣತೆ ನಮ್ಮ ದೇಶದಲ್ಲಿ ಚೆನ್ನಾಗಿದೆ. ತಾಲಿಬಾನ್ ದುಷ್ಕೃತ್ಯವನ್ನು ವಿಚಾರವಾದಿಗಳು ಖಂಡನೆಯನ್ನಾದರೂ ಮಾಡಲಿ ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next