Advertisement

ಕಾಫಿ ವಿದ್ ಕರಣ್ ಬಗ್ಗೆ ಕಡೆಗೂ ಮಾತನಾಡಿದ ಕೆ ಎಲ್ ರಾಹುಲ್ !

04:19 PM Apr 19, 2020 | keerthan |

ಬೆಂಗಳೂರು: ಟೀಂ ಇಂಡಿಯಾ ಆರಂಭಿಕ ಆಟಗಾರ ಕೆ ಎಲ್ ರಾಹುಲ್ ಶನಿವಾರ ವಷ್ಟೇ ತನ್ನ ಹುಟ್ಟುಹಬ್ಬ ಆಚರಿಸಿದರು. ಲಾಕ್ ಡೌನ್ ಪರಿಣಾಮ ಮನೆಯಲ್ಲಿದ್ದುಕೊಂಡು ತಮ್ಮ 28ನೇ ಜನ್ಮ ದಿನ ಆಚರಿಸಿಕೊಂಡರು.

Advertisement

ಟೀಂ ಇಂಡಿಯಾ, ಕರ್ನಾಟಕ, ಕಿಂಗ್ಸ್ ಇಲೆವೆನ್ ಪಂಜಾಬ್ ಜೊತೆಗಾರ ಮಯಾಂಕ್ ಅಗರ್ವಾಲ್ ಜೊತೆಗೆ ಇನ್ಸ್ಟಾ ಗ್ರಾಮ್ ಲೈವ್ ನಲ್ಲಿ ಮಾತನಾಡಿದ ಕೆ ಎಲ್ ರಾಹುಲ್ ಕಾಫಿ ವಿದ್ ಕರಣ್ ಬಗ್ಗೆ ಮಾತನಾಡಿದ್ದಾರೆ.

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿದ್ ಕರಣ್ ಕಾರ್ಯಕ್ರಮದಲ್ಲಿ ಕಳೆದ ವರ್ಷ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಭಾಗವಹಿಸಿದ್ದರು. ಆದರಲ್ಲಿ ರ್ಯಾಪಿಡ್ ಫೈರ್ ಸುತ್ತಿನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದ ಇವರಿಬ್ಬರ ಮೇಲೆ ಬಹಳಷ್ಟು ಟೀಕೆಗಳು ಕೇಳಿ ಬಂದಿದ್ದವು. ಆಸೀಸ್ ಸರಣಿಯಿಂದ ಮಧ್ಯದಲ್ಲೇ ಹಿಂದೆ ಕರೆಸಲಾಗಿತ್ತು.

ಶನಿವಾರ ಮಯಾಂಕ್ ರಾಪಿಡ್ ಫೈರ್ ಪ್ರಶ್ನೆಗಳನ್ನು ಕೇಳುತ್ತೇನೆ ಎಂದಾಗ, ಹಳೇಯ ಘಟನೆಯನ್ನು ನೆನಪಿಸಿಕೊಂಡ ಕೆ ಎಲ್, ನಿನಗೆ ಗೊತ್ತಲ್ಲಾ ರಾಪಿಡ್ ಫೈರ್ ಪ್ರಶ್ನೆಗಳನ್ನು ಯಾವಾಗಲೂ ನನ್ನನ್ನು ಸುಡುತ್ತದೆ”ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next