Advertisement

Family: ಅವಿಭಕ್ತದಿಂದ ವಿಭಕ್ತದೆಡೆಗೆ

02:58 PM Nov 27, 2023 | Team Udayavani |

ಮನುಷ್ಯ ಸಂಘ ಜೀವಿ. ಒಬ್ಬಂಟಿಯಾಗಿರಲು ಸಾಧ್ಯವೇ ಇಲ್ಲ ಎನ್ನಬಹುದು. ಹಾಗೆ ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇದ್ದವು. ಈಗಿನ ಆಧುನಿಕ ಜಗದಲ್ಲಿ ಎಲ್ಲ ಬದಲಾಗಿದೆ. ಈ ಹಿಂದೆ ಕುಟುಂಬದಲ್ಲಿ 30ರಿಂದ 40 ಮಂದಿ ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಂದೇ ಕುಟುಂಬದಲ್ಲಿ ವಾಸಿಸುತ್ತಾ ಇದ್ದರು. ಈಗ ಒಂದು ದಂಪತಿಗೆ ಒಂದೇ ಮಗುವಾಗಿದ್ದು,ವಿಭಕ್ತ ಕುಟುಂಬವಾಗಿದೆ.

Advertisement

ಅವಿಭಕ್ತ ಕುಟುಂಬಗಳಲ್ಲಿ ಜನಸಂಖ್ಯೆ ಕೂಡ ಬೃಹತ್‌ ಗಾತ್ರದಲ್ಲಿ ಇರುತ್ತದೆ. ಇದು ಪಿತೃ ಪ್ರಧಾನ ಕುಟುಂಬವಾಗಿರಬಹುದು ಅಥವಾ ಮಾತೃ ಪ್ರಧಾನ ಕುಟುಂಬವಾಗಿರಬಹುದು. ಒಂದು ಕುಟುಂಬದಲ್ಲಿ ಕುಟುಂಬದ ಹಿರಿಯ ಪುರುಷ ಸದಸ್ಯ ಮುಖ್ಯಸ್ಥನಾಗಿದ್ದು, ಈ ಕುಟುಂಬದ ಸಂಪೂರ್ಣ ಜವಾಬ್ದಾರಿಗಳಾದ ಹಣಕಾಸು, ಮದುವೆ, ಹಬ್ಬಗಳು,ಶಿಕ್ಷಣ ಮುಂತಾದ ಎಲ್ಲ ಸೌಲಭ್ಯಗಳಿಗೆ ಬಗೆಗಿನ ನಿರ್ಧಾರವನ್ನು ಅವನು ತೆಗೆದುಕೊಳ್ಳುತ್ತಾನೆ.ಅದೇ ಮಾತೃ ಪ್ರಧಾನ ಈ ಎಲ್ಲ ಜವಾಬ್ದಾರಿಯನ್ನು ಹಿರಿಯ ಮಹಿಳೆ ತೆಗೆದುಕೊಳ್ಳುತ್ತಾಳೆ.

ಹಿಂದೆ ಒಂದೇ ಸೂರಿನ ಅಡಿಯಲ್ಲಿ ಮನೆ ಎಲ್ಲ ಸದಸ್ಯರು ಒಂದೇ ರೀತಿ ಆಹಾರ ವನ್ನು ಸೇವಿಸುತ್ತಾ,ಪರಸ್ಪರ ಹೊಂದಾಣಿಕೆಯೊಂದಿಗೆ ಜೀವಿಸುತ್ತಿದ್ದರು. ಈಗ ಪ್ರಸ್ತುತ ಕುಟುಂಬಗಳಲ್ಲಿ ಆಧುನಿಕತೆಯ ಪ್ರಭಾವದಿಂದ ಅಥವಾ ಹೊಂದಿಕೊಳ್ಳುವಿಗೆ ಕಷ್ಟವಾದ ಸಂದರ್ಭದಲ್ಲಿ ಕೂಡು ಕುಟುಂಬದಿಂದ ಹೊರಬಂದು ಪ್ರತ್ಯೇಕ ಜೀವನವನ್ನು ನಡೆಸುತ್ತಿದ್ದಾರೆ.

ಅವಿಭಕ್ತ ಕುಟುಂಬದಲ್ಲಿ ಮಹಿಳೆಯ ಹಿರಿಯ ಮಹಿಳಾ ಸದಸ್ಯೆ  ಊಟ,ತಿಂಡಿ,ಹಬ್ಬದ ಸಮಯದಲ್ಲಿ ಊಟ -ಉಪಚಾರಗಳ ಸಂಪೂರ್ಣ ಜವಾಬ್ದಾರಿ ಎಂದು ತೆಗೆದುಕೊಳ್ಳುತ್ತಾರೆ. ಇತರ ಮಹಿಳಾ ಸದಸ್ಯರು ಸಹಾಯ ಮಾಡುತ್ತಾ,ಕೆಲಸವನ್ನು ಸರಿಯಾಗಿ ಹಂಚಿಕೆ ಮಾಡುತ್ತಾರೆ.

ಕೆಲವೊಂದು ಸಂದರ್ಭದಲ್ಲಿ ಮಹಿಳೆಯರನ್ನು ಹೆರಿಗೆಯ ಅನಂತರದ ಸಮಯದಲ್ಲಿ ಅಥವಾ ಗರ್ಭವತಿಯ ಸಮಯದಲ್ಲಿ ನೋಡಿಕೊಳ್ಳಲು ಸಹಾಯ ಕೂಡ ಆಗುತ್ತದೆ.ಆದರೆ ವಿಭಕ್ತ ಕುಟುಂಬದಲ್ಲಿ ಹೀಗೆ ಆಗುವುದಿಲ್ಲ ಗರ್ಭವತಿ ಅಥವಾ ಹೆರಿಗೆಯ ಅನಂತರದ ಸಮಯದಲ್ಲಿ  ಅವಳನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಒಂದು ವೇಳೆ ಅವಳ ತಾಯಿಯನ್ನು ಕಳೆದುಕೊಂಡಿದರೆ, ಅವಳನ್ನು ಆ ಮಗುವನ್ನು ಆರೈಕೆ ಮಾಡುವಲ್ಲಿ ಹಲವಾರು  ಸಮಸ್ಯೆಗಳು ಆಗುತ್ತದೆ.

Advertisement

ಅವಿಭಕ್ತ ಕುಟುಂಬದಲ್ಲಿ ಮನೆ ತುಂಬಾ ಮಕ್ಕಳು ಇರುವುದರಿಂದ ಎಲ್ಲರೊಂದಿಗೆ ಹೊಂದಾಣಿಕೆ, ಮುಕ್ತವಾಗಿ ಬೆರೆಯುವುದು, ಉತ್ತಮ ಅಭ್ಯಾಸಗಳು,ಆಟ -ಪಾಠ, ಉತ್ತಮ ನಡವಳಿಕೆಯನ್ನು ಕಲಿಯಲು ಸಹಾಯಕವಾಗುತ್ತದೆ. ಆದರೆ ವಿಭಕ್ತ ಕುಟುಂಬದಲ್ಲಿ ಮಗು ಒಂಟಿಯಾಗಿರುವುದರಿಂದ ಮಾನಸಿಕ ಖನ್ನತೆಯಿಂದ ಬಳಲುವ ಸಾಧ್ಯತೆ ಅಧಿಕವಾಗಿರುತ್ತದೆ. ಕೆಲವೊಂದು ಬಾರಿ ಅವಿಭಕ್ತ ಕುಟುಂಬದಲ್ಲಿ ಮಕ್ಕಳೊಂದಿಗೆ ಜಗಳ ಕೂಡ ವೈರತ್ವಕ್ಕೆ ತಿರುಗುವ ಸಾಧ್ಯತೆ ಕೂಡ ಇರುತ್ತದೆ.

ಅವಿಭಕ್ತ ಕುಟುಂಬದಲ್ಲಿ ಕೆಲವೊಂದು ಸೋದರತ್ವದಲ್ಲಿ ಮದುವೆ ಮಾಡಿಸುವ ಅಭ್ಯಾಸ ಇರುತ್ತದೆ. ಇದು ಹುಟ್ಟುವ ಮಕ್ಕಳಿಗೆ ಬುದ್ಧಿಮಾಂದ್ಯತೆಯನ್ನು ಉಂಟುಮಾಡುವ ಸಾಧ್ಯತೆ ಕೂಡ ಇರುತ್ತದೆ.ಇಲ್ಲಿ ಮದುವೆ ಐದರಿಂದ ಆರು ಮದುವೆಗಳು ಒಮ್ಮೆಲೆ ಸಂಭವಿಸುತ್ತದೆ.  ವಧು-ವರ ಅಭಿಪ್ರಾಯಗಳಿಗೆ ಕೆಲವೊಂದು ಬಾರಿ ಗಣನೆಗೆ ತೆಗೆದುಕೊಳ್ಳದೇ ಇರುವುದು ಕೂಡ ನೋಡಬಹುದು. ಇದರಿಂದ ಬೇರೆ ಬೇರೆ ಸಮಸ್ಯೆಗಳು ಸೃಷ್ಟಿಯಾಗುತ್ತದೆ.

ಅವಿಭಕ್ತ ಕುಟುಂಬದಲ್ಲಿ ಹಣಕಾಸು ವಿಚಾರದಲ್ಲಿ ಸಂಬಂಧಿಕರು ಸಹಾಯ ಮಾಡುತ್ತಾರೆ. ಆದರೆ ವಿಭಕ್ತ ಕುಟುಂಬದಲ್ಲಿ ಹೀಗೆ ಆಗುವುದಿಲ್ಲ, ಹಣಕಾಸು ಸಮಸ್ಯೆಗಳು ಎದುರಾದರೆ ಇಡೀ ಕುಟುಂಬವೇ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಆದರೆ ಸಕಾರಾತ್ಮಕವಾಗಿ ನೋಡುವುದಾದರೆ ಮನುಷ್ಯ ಸ್ವಾವಲಂಬಿಯಾಗಿ  ಬದುಕಲು ಸಾಧ್ಯವಾಗುತ್ತದೆ. ವಿಭಕ್ತ ಕುಟುಂಬ ವಾಗಲಿ,ಅವಿಭಕ್ತ ಕುಟುಂಬವಾಗಲಿ, ಒಂದೊಂದು ವಿಚಾರದಲ್ಲಿ ಅದು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ ಅದನ್ನು ಪರಿಶೀಲಿಸಿ ನೋಡಲು ಕಷ್ಟ ಆಗುತ್ತದೆ.

ದೇವಿಶ್ರೀ ಶಂಕರಪುರ

ಆಳ್ವಾಸ್‌ ಕಾಲೇಜು, ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next