Advertisement

ಉದ್ಯೋಗ ನೇಮಕಾತಿ ಹಗರಣ: TMC ಶಾಸಕರ ಮೇಲೆ CBI ದಾಳಿ

08:10 PM Apr 15, 2023 | Team Udayavani |

ಕೋಲ್ಕತ: ಶಾಲಾ ಉದ್ಯೋಗ ನೇಮಕಾತಿ ಹಗರಣ ಸಂಬಂಧಿಸಿದಂತೆ ಟಿಎಂಸಿ ಶಾಸಕರಾದ ಜಿಬನ್‌ಕೃಷ್ಣ ಸಹಾ ಹಾಗೂ ಬಿಭಸ್‌ ಅಧಿಕಾರಿಯವರ ನಿವಾಸಗಳ ಮೇಲೆ ಶನಿವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Advertisement

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಬುರ್ವಾನ್‌ನಲ್ಲಿರುವ ಸಹಾ ಅವರ ನಿವಾಸದ ಮೇಲೆ ಸಿಆರ್‌ಪಿಎಫ್ ಸಿಬ್ಬಂದಿ ಸಮೇತರಾಗಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಬ್ಯಾಗ್‌ ಒಂದು ಪತ್ತೆಯಾಗಿದೆ.

ನಿವಾಸದಿಂದ ಸ್ವಲ್ಪವೇ ದೂರದಲ್ಲಿರುವ ಕಾಡಿನಲ್ಲಿ ಪತ್ತೆಯಾದ ಬ್ಯಾಗ್‌ನಲ್ಲಿ ಹಗರಣಕ್ಕೆ ಸಂಬಂಧಿಸಿದ್ದು ಎನ್ನಲಾಗಿರುವ ಕೆಲ ದಾಖಲೆಗಳಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ನಲಹಟ್ಟಿಯಲ್ಲಿರುವ ಬಿಭಸ್‌ ಅವರ ನಿವಾಸದ ಮೇಲೂ ದಾಳಿ ನಡೆಸಿ ಅವರನ್ನು ತನಿಖೆಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next