Advertisement
ಅವರು ಕಡೆಕಾರು ಕುತ್ಪಾಡಿ ಭಾಗದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು. ನಾರಾಯಣ ಗುರು ಅಭಿವೃದ್ಧಿ ಮಂಡಳಿಗೆ 1250 ಕೋ.ರೂಕಾಂಗ್ರೆಸ್ ನಾಯಕ ಸದಾಶಿವ ಅಮೀನ್ ಕಟ್ಟೆಗುಡ್ಡೆ ಮಾತನಾಡಿ, ನಾರಾಯಣ ಗುರು ಅಭಿವೃದ್ಧಿ ಮಂಡಳಿಗೆ ಕಾಂಗ್ರೆಸ್ ರೂ. 1250 ಕೋಟಿ ಮೀಸಲಿಡಲಿದೆ. ಕರಾವಳಿಯಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡಿ ವಿಶೇಷ ಐಟಿ ಹಾಗೂ ಗಾರ್ಮೆಂಟ್ಸ್ ಹಬ್ ವಲಯ ರಚನೆ ಮಾಡುವ ಭರವಸೆ ಕರಾವಳಿಯ ಅಭಿವೃದ್ಧಿಗೆ ವೇಗ ನೀಡುವ ವಿಚಾರವಾಗಿದೆ ಎಂದರು.
ಪ್ರತಿಯೊಬ್ಬ ಮೀನುಗಾರರಿಗೆ ಹತ್ತು ಲಕ್ಷ ರೂ. ವಿಮೆ ಸೌಲಭ್ಯ, ಪ್ರತಿ ಮೀನುಗಾರ ಮಹಿಳೆಗೆ ಒಂದು ಲಕ್ಷ ರೂ. ಬಡ್ಡಿ ರಹಿತ ಸಾಲ, ಆಧುನಿಕ ಸುಸಜ್ಜಿತ ಬೋಟ್ ಖರೀದಿಸಲು ರೂ. 25 ಲಕ್ಷದವರೆಗೆ ಸಹಾಯಧನ, ಡಿಸೇಲ್ ಸಹಾಯ ಧನ ರೂ. 25 ಕ್ಕೆ ಏರಿಕೆ, ಪ್ರಮಾಣವನ್ನು 300 ರಿಂದ 500 ಲೀಟರ್ಗೆ ಏರಿಕೆ ಇವೆಲ್ಲವೂ ಕಾಂಗ್ರೆಸ್ ಸರಕಾರ ಬಂದರೆ ಖಚಿತವಾಗಿ ಜಾರಿ ಆಗುವ ಯೋಜನೆಗಳು ಎಂದು ಜಿ. ಪಂ. ಮಾಜಿ ಸದಸ್ಯ ದಿವಾಕರ ಕುಂದರ್ ಹೇಳಿದರು.
Related Articles
ಕಾಂಗ್ರೆಸ್ ಮುಖಂಡ ಕೀರ್ತಿ ಶೆಟ್ಟಿ ಅಂಬಲಪಾಡಿ ಮಾತನಾಡಿ, ಬಿಜೆಪಿಯ ಮುಖಂಡರು ಸುಳ್ಳನ್ನೇ ತಮ್ಮ ಮನೆ ದೇವರನ್ನಾಗಿ ಮಾಡಿದ್ದಾರೆ. ರಾಷ್ಟ್ರಮಟ್ಟದಿಂದ ಉಡುಪಿಯವರೆಗೆ ಬಿಜೆಪಿ ಮುಖಂಡರು ಮಾತನಾಡುವುದು ಸುಳ್ಳು ಮಾತ್ರ. ಡಬಲ್ ಇಂಜಿನ್ ಇದ್ದೂ ಇನ್ನೂ ಇಂದ್ರಾಳಿ ಸೇತುವೆಯನ್ನು ಒಂದಿಂಚು ಅಗಲ ಮಾಡಲು ಇವರಿಂದ ಆಗಲಿಲ್ಲ. ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ ಆದರೂ ನಳಿನ್ ಕುಮಾರ್ ಕಟೀಲ್ ರಸ್ತೆ ಚರಂಡಿ ಬಗ್ಗೆ ಮಾತನಾಡಬಾರದು ಎಂದು ಹೇಳುತ್ತಾರೆ ಎಂದರು.
Advertisement
ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ ಸರಕಾರರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಈ ಬಾರಿ ಬರುವುದು ಖಚಿತ. ಇದು ಮುಂದಿನ ವರ್ಷ ಲೋಕಸಭಾ ಚುನಾವಣೆಗೂ ದಿಕ್ಸೂಚಿ ಆಗಿ ಮುಂದಿನ ವರ್ಷ ಕೇಂದ್ರದಲ್ಲೂ ಕಾಂಗ್ರೆಸ್ ನೇತೃತ್ವದ ಸರಕಾರ ಬರಲಿದೆ. ಎಲ್ಲಾ ಜನರನ್ನು ಶಾಶ್ವತವಾಗಿ ಮೂರ್ಖರನ್ನಾಗಿ ಮಾಡಿ ಇಡಲು ಸಾಧ್ಯ ಇಲ್ಲ ಎಂದು ಬಿಜೆಪಿಗೆ ಸದ್ಯದಲ್ಲೇ ಅರಿವಾಗಲಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮೃತ್ ಶೆಣೈ ಹೇಳಿದರು. ಕಾಂಗ್ರೆಸ್ ಸಾಧನೆ ತನ್ನ ಸಾಧನೆ ಎನ್ನುತ್ತಿದೆ ಬಿಜೆಪಿ
ಕಾಂಗ್ರೆಸ್ ಮಾಡಿದ ಸಾಧನೆಗಳನ್ನೇ ತಾನು ಮಾಡಿದ ಸಾಧನೆ ಎಂದು ಹೋದಲೆಲ್ಲಾ ಹೇಳುವ ಬಿಜೆಪಿ ಮುಖಂಡರಿಗೆ ಸ್ವಲ್ಪವೂ ನಾಚಿಕೆಯಾಗುವುದಿಲ್ಲವಾ? ಮೋದಿ ಸರಕಾರ ಉದ್ಘಾಟನೆ ಮಾಡಿದ ಎಲ್ಲವೂ ಡಾ| ಮನಮೋಹನ್ ಸಿಂಗ್ ಸರಕಾರ ಮಾಡಿದ ಯೋಜನೆಗಳನ್ನು ಎಂಬುದು ಮತದಾರರಿಗೆ ಮನ ಮುಟ್ಟುವಂತೆ ಹೇಳುವ ಕೆಲಸ ಉಡುಪಿ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಂದ ಆಗಿದೆ ಎಂದು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನಕರ ಹೇರೂರ್ ಹೇಳಿದರು. ಮುಖಂಡರಾದ ವಾಮನ ಬಂಗೇರ, ಮಹಾಬಲ ಕುಂದರ್, ಉದ್ಯಾವರ ನಾಗೇಶ್ ಕುಮಾರ್, ಪ್ರಶಾಂತ್ ಪೂಜಾರಿ, ಆನಂದ ಪೂಜಾರಿ, ಮಿಥುನ್ ಅಮೀನ್, ಶಬರೀಶ್ ಸುವರ್ಣ, ಬಾಲಕೃಷ್ಣ ಪೂಜಾರಿ, ಮಮತಾ ಶೆಟ್ಟಿ, ಪಂಚಾಯತ್ ಸದಸ್ಯರಾದ ಲಕ್ಷ್ಮಣ್, ಭಾಸ್ಕರ ದೇವಾಡಿಗ, ಅಣ್ಣಯ್ಯ ಸೇರಿಗಾರ್, ನಾಸೀರ್, ನಶೀಶ್, ಆರ್. ಕೆ. ರಮೇಶ್ ಪೂಜಾರಿ, ಜ್ಯೋತಿ ಹೆಬ್ಟಾರ್, ಜಯಶ್ರೀ ಶೇಟ್, ಸತೀಶ್ ಕುಮಾರ್ ಮಂಚಿ, ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.