Advertisement

ಜೆ.ಎನ್‌.ಗಣೇಶ್‌ ವಿಚಾರಣೆ 19ಕ್ಕೆ  ಮುಂದೂಡಿಕೆ

12:30 AM Mar 07, 2019 | Team Udayavani |

ರಾಮನಗರ: ಬಿಡದಿ ಬಳಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ಶಾಸಕರಾದ ಆನಂದ್‌ ಸಿಂಗ್‌ ಮತ್ತು ಗಣೇಶ್‌ ಅವರ ನಡುವಿನ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಎನ್‌.ಗಣೇಶ್‌ ಅವರ ವಿಚಾರಣೆ ಯನ್ನು ಇಲ್ಲಿನ ಸಿಜೆಎಂ ನ್ಯಾಯಾಲಯ ಮಾ.19ಕ್ಕೆ ಮುಂದೂಡಿದೆ.

Advertisement

ಗಣೇಶ್‌ ಅವರಿಗೆ ಸಿಜೆಎಂ ನ್ಯಾಯಾಲಯ ವಿಧಿಸಿದ್ದ ನ್ಯಾಯಾಂಗ ಬಂಧನದ ಅವಧಿಯೂ ಸಹ ಮಾ.19 ರವರೆಗೆ ವಿಸ್ತರಣೆಯಾಗಿದೆ. ಅನಾ ರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಗಣೇಶ್‌ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ, ಹೀಗಾಗಿ ಅವರು ಬುಧವಾರ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಗೊತ್ತಾಗಿದೆ. ನ್ಯಾಯಾಂಗ ಅವಧಿ ಬುಧವಾರ ಮುಗಿ  ದಿದ್ದು, ಶಾಸಕರು ಗೈರಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಅನಿತಾ ವಿಚಾರಣೆಯನ್ನು ಮಾರ್ಚ್‌ 19ಕ್ಕೆ
ಮುಂದೂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next