Advertisement

ಮತಗಟ್ಟೆಗೆ ಬಾರದ ಜನ

07:45 AM Oct 09, 2018 | Karthik A |

ಶ್ರೀನಗರ: ಜಮ್ಮು ಕಾಶ್ಮೀರದ ಸ್ಥಳೀಯ ಸಂಸ್ಥೆ ಚುನಾವಣೆಯ ಮೊದಲ ಹಂತದಲ್ಲಿ ಜನರು ಕೆಲವು ಪ್ರದೇಶಗಳಲ್ಲಿ ಮತಗಟ್ಟೆಯಿಂದ ದೂರವೇ ಉಳಿದಿದ್ದಾರೆ. ಉಗ್ರರ ಬೆದರಿಕೆಯಿಂದಾಗಿ ಉಪಟಳ ಹೆಚ್ಚಿರುವ ಬಾರಾಮುಲ್ಲಾ (ಶೆ‌. 5.1), ಬಂಡಿಪೋರಾ (ಶೇ. 3.4), ಶ್ರೀನಗರ (ಶೇ. 6.2), ಅನಂತನಾಗ್‌ (ಶೇ. 7.3) ಹಾಗೂ ಕುಪ್ವಾರಾದಲ್ಲಿ (ಶೇ.32.3) ಜನರು ಮತಗಟ್ಟೆಗೆ ಕಾಲಿಡಲು ಹೆದರಿದ್ದಾರೆ. ಈ ಭಾಗಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಇನ್ನುಳಿದಂತೆ ರಜೌರಿಯಲ್ಲಿ ಅತ್ಯಧಿಕ ಶೇ. 81, ಕಾರ್ಗಿಲ್‌ನಲ್ಲಿ ಶೇ. 78.2 ರಷ್ಟು ಮತದಾನವಾಗಿದೆ. ಉಳಿದ ಜಿಲ್ಲೆಗಳಲ್ಲಿ ಉತ್ತಮ ಮತದಾನವಾಗಿದೆ. ಸೋಮವಾರ ಮೊದಲ ಹಂತದ ಮತದಾನ ನಡೆದಿದ್ದು, ಇನ್ನೂ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next