Advertisement

ವಾಸೀಂ ಬರಿ ಹತ್ಯೆ ಪ್ರಕರಣ: ರಕ್ಷಣೆಗೆ ನಿಯೋಜಿಸಲಾಗಿದ್ದ ಎಂಟು ಪೊಲೀಸರ ಬಂಧನ

03:29 PM Jul 09, 2020 | keerthan |

ಶ್ರೀನಗರ: ಉಗ್ರಗಾಮಿಗಳು ಇಲ್ಲಿನ ಬಂಡಿಪೊರಾ ಬಿಜೆಪಿ ನಾಯಕ ವಾಸೀಂ ಬರಿ ಅವರನ್ನು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ರಕ್ಷಣೆಗೆ ನಿಯೋಜಿಸಲಾಗಿದ್ದ ಎಂಟು ಪೊಲೀಸರನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

Advertisement

ಬಿಜೆಪಿ ನಾಯಕ ಶೇಕ್ ವಾಸೀಂ ಬರಿ, ತಂದೆ ಬಶೀರ್ ಅಹಮದ್ ಶೇಕ್, ಮತ್ತು ಸಹೋದರ ಉಮರ್ ಸುಲ್ತಾನ್ ಅವರ ಮೇಲೆ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದರು. ಉಗ್ರರ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಫಲಿಸಿರಲಿಲ್ಲ.

ಆದರೆ ಈ ಕುಟುಂಬದ ರಕ್ಷಣೆಗೆಂದು ನಿಯೋಜಿಸಲಾಗಿದ್ದ ಎಂಟು ಪೊಲೀಸರು ಈ ಸಮಯದಲ್ಲಿ ವಾಸೀಂ ಬರಿ ಕುಟಂಬದ ಮನೆಯ ಕಟ್ಟಡದ ಮೊದಲ ಮಹಡಿಯಲ್ಲಿ ಕುಳಿತಿದ್ದರು. ಆದರೆ ವಾಸೀಂ ಬರಿ, ತಂದೆ ಮತ್ತು ಸಹೋದರ ಅದೇ ಕಟ್ಟಡದ ಕೆಳಗಿನ ತಮ್ಮ ಅಂಗಡಿಯಲ್ಲಿದ್ದರು. ಉಗ್ರರು ಅಂಗಡಿಗೆ ದಾಳಿ ಮಾಡಿ ಕೊಲೆ ಮಾಡಿದ್ದಾರೆ.

ಪೊಲೀಸರನ್ನು ವಶಕ್ಕೆ ಪಡೆದಿರುವ ವಿಚಾರವನ್ನು ಜಮ್ಮು ಕಾಶ್ಮೀರ ಐಜಿ ವಿಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next