Advertisement

ವಾಹಿನಿ ಸಂಪಾದಕರ ಪ್ರಚೋದನಕಾರಿ ಭಾಷಣದ ವಿರುದ್ಧ ತನಿಖೆ

10:00 AM Mar 12, 2020 | Hari Prasad |

ಜಾರ್ಖಂಡ್‌: ಗಲಭೆ ಮಾಡುವವರಿಗೆ ಉದ್ಯೋಗ ದೊರೆಯದಂತೆ ಮಾಡುತ್ತೇವೆ ಎಂದು ವಾಹಿನಿಯೊಂದರ ಸಂಪಾದಕರು ಹೇಳಿದ್ದಾರೆ ಎಂಬ ಆರೋಪದ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈ ಬಗ್ಗೆ ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಮಂಗಳವಾರ ಟ್ವೀಟ್‌ ಮಾಡಿದ್ದಾರೆ.

Advertisement

ಜಾರ್ಖಂಡ್‌ ಪೊಲೀಸ್‌ ಮಹಾ ನಿರ್ದೇಶಕರು ಕೂಡ ಆ ಬಗ್ಗೆ ಪ್ರತಿಕ್ರಿಯೆ ನೀಡಿ, ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಹೇಳಿದ್ದಾರೆ. ವಾಹಿನಿಯ ಸಂಪಾದಕರು ವೀಡಿಯೋ ಟ್ವೀಟ್‌ ಮಾಡಿದ್ದರಿಂದ ಅದರ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next