Advertisement

ನಟ ಉಪೇಂದ್ರ ವಿರುದ್ಧ ಜೆಡಿಯು ದೂರು

12:45 PM Nov 03, 2017 | Team Udayavani |

ಬೆಂಗಳೂರು: ಚಿತ್ರನಟ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಗೌರವಾಧ್ಯಕ್ಷ ಉಪೇಂದ್ರ ವಿರುದ್ಧ ಶೇಷಾದ್ರಿಪುರಂ ಪೊಲೀಸ್‌ ಠಾಣೆ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

Advertisement

ಜೆಡಿಯುನ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ನಾಗೇಶ್‌ ದೂರು ನೀಡಿದ್ದು, ರಾಜಕೀಯ ಪಕ್ಷವೊಂದರ ಗೌರವ ಅಧ್ಯಕ್ಷರು ಹಾಗೂ ನಟರಾಗಿರುವ ಉಪೇಂದ್ರ ತಮ್ಮ ಪಕ್ಷದ ಉದ್ಘಾಟನೆ ವೇಳೆ “ಬೇರೆ ಪಕ್ಷದವರು ಹಣ ನೀಡಿದರೆ ಸ್ವೀಕರಿಸಿ ನಿಮ್ಮದೇ ದುಡ್ಡು’ ಎಂದು ಹೇಳಿದ್ದಾರೆ. ಪಾರದರ್ಶಕ ಚುನಾವಣೆ ನಡೆಯಬೇಕೆಂಬ ಸಂವಿಧಾನದ ಆಶಯಗಳಿಗೆ ಇದು ವಿರುದ್ಧವಾಗಲಿದೆ.

ಜೊತೆಗೆ ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಲಿದೆ. ಈ ನಿಟ್ಟಿನಲ್ಲಿ ಉಪೇಂದ್ರ ಅವರು ಸಾರ್ವಜನಿಕವಾಗಿ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯುವಂತೆ ಸೂಚಿಸಬೇಕು ಹಾಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next