Advertisement

ಸ್ಪೀಕರ್ ತೀರ್ಪು ಸ್ವಾಗತಿಸುತ್ತೇವೆ: ಜೆಡಿಎಸ್‌ ವಕ್ತಾರ ರಮೇಶ್ ಬಾಬು

09:35 AM Jul 29, 2019 | Team Udayavani |

ಬೆಂಗಳೂರು: ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಎಲ್ಲಾ ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ತೀರ್ಪು ಹೊರಡಿಸಿದ್ದು, ಜಾತ್ಯಾತೀತ ಜನತಾ ದಳ ಈ ತೀರ್ಪನ್ನು ಸ್ವಾಗತಿಸಿದೆ.

Advertisement

ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್‌ ವಕ್ತಾರ ರಮೇಶ್ ಬಾಬು, ಸ್ಪೀಕರ್ ತೀರ್ಪು ಸ್ವಾಗತಿಸುತ್ತೇವೆ. ಪಕ್ಷದ ಬಿ ಫಾರಂ ಪಡೆದು ಆ ಪಕ್ಷದ ಸಿದ್ದಾಂತ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಗೆಲುವು ಸಾಧಿಸಿ, ಆಸೆ ಆಮಿಷಗಳಿಗೆ ಬಲಿಯಾಗಿ ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ದ್ರೋಹ ಬಗೆಯುವವರಿಗೆ ಇದು ಪಾಠವಾಗಲಿದೆ  ಎಂದಿದ್ದಾರೆ.

ಜೆಡಿಎಸ್‌ ನ ಒಟ್ಟು ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ. ಹೆಚ್.‌ ವಿಶ್ವನಾಥ್‌, ಕೆ. ಗೋಪಾಲಯ್ಯ, ಮತ್ತು ನಾರಾಯಣ ಗೌಡ ಅನರ್ಹಗೊಂಡ ಜೆಡಿಎಸ್‌ ಶಾಸಕರು.

Advertisement

Udayavani is now on Telegram. Click here to join our channel and stay updated with the latest news.

Next