Advertisement

BJP ಜತೆ ಜೆಡಿಎಸ್‌ ಶೀಘ್ರ ವಿಲೀನ: ಶೆಟ್ಟರ್‌

08:43 PM Dec 12, 2023 | Team Udayavani |

ಹುಬ್ಬಳ್ಳಿ: ಜೆಡಿಎಸ್‌ ಶೀಘ್ರವೇ ಬಿಜೆಪಿಯೊಂದಿಗೆ ವಿಲೀನವಾಗಲಿದೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮನಃಪರಿವರ್ತನೆಯೇ ಇದಕ್ಕೆ ಪುಷ್ಟಿ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ್‌ ಭಟ್‌ರ ಶಾಲೆಗೆ ಭೇಟಿ ನೀಡಿದ ವೇಳೆ ಮನಃಪರಿವರ್ತನೆಯಾಗಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ. ಇದು ಜೆಡಿಎಸ್‌ ಮತ್ತು ಬಿಜೆಪಿ ವಿಲೀನಗೊಳ್ಳುವ ಪ್ರಾಥಮಿಕ ಹಂತದ ಮುನ್ಸೂಚನೆ. ಸಿ.ಎಂ.ಇಬ್ರಾಹಿಂ ಈಗಾಗಲೇ ಮತ್ತೂಂದು ಜೆಡಿಎಸ್‌ ಕಟ್ಟಿದ್ದಾರೆ.

Advertisement

ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಇರುವ ಜೆಡಿಎಸ್‌ ಕೆಲವೇ ದಿನಗಳಲ್ಲಿ ಬಿಜೆಪಿಯಲ್ಲಿ ವಿಲೀನವಾಗುತ್ತದೆ. ಕುಮಾರಸ್ವಾಮಿ ಜೈ ಶ್ರೀರಾಮ ಎಂದಿದ್ದು, ಪ್ರಭಾಕರ ಭಟ್ಟರ ಸ್ಕೂಲ್‌ಗೆ ಹೋಗಿ ಮನಃಪರಿವರ್ತನೆ ಆಗಿದೆ ಎಂದು ಹೇಳಿದ್ದು ಇದಕ್ಕೆ ಪುಷ್ಟಿ. ಕುಮಾರಸ್ವಾಮಿ ಹಿಟ್‌ ಆ್ಯಂಡ್‌ ರನ್‌ ಗಿರಾಕಿ. ತಾಕತ್ತಿದ್ದರೆ 50 ಶಾಸಕರೊಂದಿಗೆ ಬಿಜೆಪಿ ಸೇರುವ ಪ್ರಭಾವಿ ಸಚಿವರ ಹೆಸರು ಬಹಿರಂಗ ಪಡಿಸಲಿ. ಈ ಹಿಂದೆ ಪೆನ್‌ ಡ್ರೈವ್‌, ಸಿಡಿ ತೋರಿಸಿದರು. ಈಗ ಅವೆಲ್ಲವೂ ಎಲ್ಲಿ ಹೋದವು. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಕುರಿತು ಅಷ್ಟಾಗಿ ಚರ್ಚೆ ನಡೆಯುತ್ತಿಲ್ಲ. ಪ್ರತಿಪಕ್ಷಗಳು ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next