Advertisement

ದಸರಾ ಸಮಿತಿಯಲ್ಲಿ ಜೆಡಿಎಸ್‌ ಪಾರುಪತ್ಯ ;ಸಭೆ ಬಹಿಷ್ಕರಿಸಿದ ಕೈ ಸಚಿವ!

11:39 AM Sep 14, 2018 | Team Udayavani |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕಾರಿ ಸಮಿತಿಯ ಸಭೆ ಶುಕ್ರವಾರ ನಡೆದಿದ್ದು ,ಮೈತ್ರಿ ಸರ್ಕಾರದ ನಡುವಿನ ಅಸಮಾಧಾನ ಬಹಿರಂಗವಾಗಿದೆ.ಕಾಂಗ್ರೆಸ್‌ ಸಚಿವ , ಚಾಮಾರಾಜನಗರ ಜಿಲ್ಲಾ ಉಸ್ತುವಾರಿ ಪುಟ್ಟರಂಗ ಶೆಟ್ಟಿ ಅವರು ಸಭೆಯಿಂದಲೆ ಹೊರ ನಡೆದ ಪ್ರಸಂಗ ನಡೆದಿದೆ. 

Advertisement

ಸಭೆ ಆರಂಭವಾಗುವಾಗಲೆ ಅಸಮಾಧಾನ ಹೊರ ಹಾಕಿದ ಸಚಿವ ಪುಟ್ಟರಂಗ ಶೆಟ್ಟಿ  ಮಾತಿಗೆ ಬೆಲೆ ಸಿಗದಾದಾಗ ಆಕ್ರೋಶಕೊಂಡು ಸಭೆಯಿಂದ ಹೊರ ನಡೆದಿದ್ದಾರೆ.

ಸಭೆಯಿಂದ ಶಿಷ್ಟಾಚಾರದಂತೆ ನನಗೆ ಕಾರ್ಯಕಾರಿ ಸಮಿತಿಯಲ್ಲಿ ನನಗೆ ಉಪಾಧ್ಯಕ್ಷ ಸ್ಥಾನ ನೀಡಬೇಕಿತ್ತು, ಆದರೆ ನನ್ನ ಬದಲಾಗಿ ಸಚಿವ ಸಾ.ರಾ.ಮಹೇಶ್‌ ಅವರಿಗೆ ನೀಡಿದ್ದಾರೆ.ಎಲ್ಲವನ್ನೂ ಅವರೇ ಮಾಡಿಕೊಳ್ಳಲಿ. ನಾನು ಈ ವಿಚಾರವನ್ನು ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸುತ್ತೇನೆ ಎಂದಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next