Advertisement

BJP ತತ್ವ, ಸಿದ್ಧಾಂತಕ್ಕೆ ಜೆಡಿಎಸ್‌ ಬದ್ಧವಾಗಿರಬೇಕು: ಪ್ರೀತಂ ಜೆ.ಗೌಡ

11:03 PM Oct 05, 2023 | Team Udayavani |

ಹಾಸನ: ಹಾಸನದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಬಿಜೆಪಿಯ ಮಾಜಿ ಶಾಸಕ ಪ್ರೀತಂ ಜೆ.ಗೌಡ, ಬಿಜೆಪಿ -ಜೆಡಿಎಸ್‌ ಮೈತ್ರಿ ಬಗ್ಗೆ ವರಿಷ್ಠರ ಮಟ್ಟದಲ್ಲಿ ನಿರ್ಧಾರವಾಗಿದೆ. ಪಕ್ಷದ ಕಾರ್ಯಕರ್ತನಾಗಿ ಹಿರಿಯರ ನಿರ್ಧಾರಕ್ಕೆ ನಾನು ಬದ್ಧನಾಗಿರುವೆ. ಬಿಜೆಪಿ ರಾಷ್ಟ್ರೀಯ ಪಕ್ಷ, ಜೆಡಿಎಸ್‌ ಪ್ರಾದೇಶಿಕ ಪಕ್ಷ. ಹೊಂದಾಣಿಕೆಗೆ ಬಿಜೆಪಿ ಬಳಿ ಜೆಡಿಎಸ್‌ ಬಂದಿದೆ. ಮನೆಗೆ ಬಂದ ನೆಂಟರನ್ನು ಹೇಗೆ ನಡೆಸಿಕೊಳ್ಳಬೇಕೋ ಹಾಗೆ ನಡೆಸಿಕೊಳ್ಳಲಾಗುತ್ತದೆ. ಬಿಜೆಪಿ ಜತೆಗೆ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿದೆಯೇ ಹೊರತು ಜೆಡಿಎಸ್‌ ಜತೆಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಹೇಳಿದರು.

Advertisement

ಜೆಡಿಎಸ್‌ನವರು ನಮ್ಮ ಸಂಬಂಧ ಬೆಳೆಸಿದ ಮೇಲೆ ಬಿಜೆಪಿಯ ಸಿದ್ಧಾಂತ, ಸಂಸ್ಕಾರವನ್ನು ತಿಳಿದುಕೊಂಡಿರುತ್ತಾರೆ. ಬಿಜೆಪಿಯದು ರಾಷ್ಟ್ರೀಯತೆ. ದೇಶ ಮೊದಲು ವ್ಯಕ್ತಿ ಕೊನೆಗೆ ಎಂಬ ನಿಲುವು ಬಿಜೆಪಿಯದ್ದು. ಇದೆಲ್ಲವನ್ನೂ ಒಪ್ಪಿಕೊಂಡು ಬರುವುದಾದರೆ ಬೇಡ ಎನ್ನಲಾಗದು. ನಮ್ಮಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next