Advertisement

ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿಲ್ಲ

06:15 AM Jul 24, 2018 | Team Udayavani |

ಮೈಸೂರು: “ಜಾತ್ಯತೀತ ಜನತಾದಳ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾವುದೇ ರೀತಿಯ ಪೈಪೋಟಿ ನಡೆಸಿಲ್ಲ’ ಎಂದು ಹುಣಸೂರು ಶಾಸಕ ಅಡಗೂರು ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ. 

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾನಾಗಲಿ, ಮಧು ಬಂಗಾರಪ್ಪ ಆಗಲಿ ಪೈಪೋಟಿ ನಡೆಸುತ್ತಿಲ್ಲ.

ಅಧ್ಯಕ್ಷರಾದರೆ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡಬೇಕಾಗುತ್ತದೆ. ಆರೋಗ್ಯ ಸಮಸ್ಯೆಯಿಂದಾಗಿ ನನ್ನಿಂದ ಆ ಕೆಲಸ ಸಾಧ್ಯವಾಗದು.ಹೀಗಾಗಿ ನಾನು ಅಧ್ಯಕ್ಷನಾಗುವ ಆಸೆ ಹೊಂದಿಲ್ಲ. ಆದರೆ,ಪಕ್ಷದಲ್ಲಿ ವರಿಷ್ಠರಾದ ಎಚ್‌.ಡಿ.ದೇವೇಗೌಡರ ಮಾತೇ ಅಂತಿಮ. ದೇವೇಗೌಡರು ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧವಿದೆ. ಅವರಾಗೇ ಪಕ್ಷದ ಜವಾಬ್ದಾರಿ ವಹಿಸಿದರೆ, ಗೌರವಯುತವಾಗಿ ಒಪ್ಪಿಕೊಂಡು ಪಕ್ಷದ ಸಂಘಟನೆಗೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನಕ್ಕಾಗಿಯೂ ನಾನು ದುಂಬಾಲು ಬಿದ್ದಿಲ್ಲ. ಜೆಡಿಎಸ್‌ ಶಾಸಕನಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಎದುರಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next