Advertisement

14 ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ

11:43 PM Nov 18, 2019 | Team Udayavani |

ಬೆಂಗಳೂರು: ಹನ್ನೊಂದು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡರಿಗೆ ಬೆಂಬಲ ಘೋಷಿಸಿದ್ದ ಜೆಡಿಎಸ್‌ ಸೋಮವಾರ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಿತು.

Advertisement

ಅಥಣಿಯಲ್ಲಿ ಗುರು ದಾಸ್ಯಾಳ್‌, ಕಾಗವಾಡದಲ್ಲಿ ಶೈಲ ಪರಸಪ್ಪ ತೂಬಶೆಟ್ಟಿ, ಗೋಕಾಕ್‌ನಲ್ಲಿ ಅಶೋಕ್‌ ಪೂಜಾರಿ, ಹಿರೇಕೆರೂರಿನಲ್ಲಿ ಶಿವಲಿಂಗ ಮಹಾಚಾರ್ಯ ಸ್ವಾಮೀಜಿಗೆ ಟಿಕೆಟ್‌ ನೀಡಿದೆ. ಒಟ್ಟು ಹದಿನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದಂತಾಗಿದೆ.

ಸ್ಟಾರ್‌ ಪ್ರಚಾರಕರು: ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ 40 ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಜೆಡಿಎಸ್‌ ಬಿಡುಗಡೆ ಮಾಡಿದ್ದು, ಎಚ್‌.ಡಿ.ದೇವೇಗೌಡರ ಕುಟುಂಬದವರೇ ಎಂಟು ಮಂದಿ ಸ್ಥಾನ ಪಡೆದಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ, ಅನಿತಾ ಕುಮಾರಸ್ವಾಮಿ, ಭವಾನಿ ರೇವಣ್ಣ, ಸೂರಜ್‌ ರೇವಣ್ಣ, ಜತೆಗೆ ಸಂಸದ ಪ್ರಜ್ವಲ್‌, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸ್ಟಾರ್‌ ಪ್ರಚಾರಕರಾಗಿದ್ದಾರೆ.

ಉಳಿದಂತೆ ಮಾಜಿ ಸಚಿವ ರಾದ ಬಂಡೆಪ್ಪ ಕಾಶೆಂಪುರ್‌, ವೆಂಕಟರಾವ್‌ ನಾಡಗೌಡ, ಬಸವರಾಜ ಹೊರಟ್ಟಿ, ಸಾ.ರಾ.ಮಹೇಶ್‌, ಬಿ.ಬಿ.ನಿಂಗಪ್ಪ, ಪರಿಷತ್‌ ಸದಸ್ಯ ರಾದ ಶರವಣ, ಕಾಂತರಾಜ್‌, ಮುಖಂಡ ರಮೇಶ್‌ ಬಾಬು ಪಟ್ಟಿಯಲ್ಲಿ ದ್ದಾರೆ. ಮಧುಬಂಗಾರಪ್ಪ, ಜಿ.ಟಿ. ದೇವೇಗೌಡ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next