Advertisement

ಶ್ರಮ ಪಟ್ಟರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 120 ಸೀಟು ಗೆಲ್ಲಬಹುದು: ಬಂಡೆಪ್ಪ ಕಾಶಂಪೂರ್

02:45 PM Feb 14, 2021 | Team Udayavani |

ಬೆಂಗಳೂರು: ವಿಧಾನಸೌಧದಲ್ಲಿ ಜೆಡಿಎಸ್ ಬಾವುಟ ಊರಲು ನಾವು ಪಣತೊಡಬೇಕು. 120 ಸೀಟ್ ಗೆಲ್ಲಲು ನಾವು ಶ್ರಮಪಡಬೇಕು. ಶ್ರಮ ಪಟ್ಟರೆ ಮುಂಬರುವ ಚುನಾವಣೆಯಲ್ಲಿ 120 ಸೀಟ್ ಗಳನ್ನು ಜೆಡಿಎಸ್ ಗೆಲ್ಲಬಹುದು ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪೂರ್ ಹೇಳಿದರು.

Advertisement

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಜೆಡಿಎಸ್ ಸಮಾವೇಶದಲ್ಲಿ ಅವರು ಮಾತನಾಡಿದರು.

ಜೆಡಿಎಸ್ ಎಲ್ಲಿದೆ ಎನ್ನುತ್ತಾರೆ? ಬೀದರ್ ನಿಂದ ಚಾಮರಾಜನಗರದವರೆಗೂ ಜೆಡಿಎಸ್ ಇರುವುದೇ ಅವರ ಪ್ರಶ್ನೆಗೆ ಉತ್ತರ ಎಂದು ಕಾಂಗ್ರೆಸ್- ಬಿಜೆಪಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ:ಐಕ್ಯತೆಯಿಂದ ಕೆಲಸ ಮಾಡಬೇಕಿದೆ: ಜೆಡಿಎಸ್ ಸಮಾವೇಶದಲ್ಲಿ ಎಚ್.ಡಿ.ದೇವೇಗೌಡ

ರೈತರ ಬಗ್ಗೆ ಮಾತನಾಡುವವರು ಯಾರಾದರೂ ಇದ್ದರೆ ಅದು ದೇವೇಗೌಡರು ಮಾತ್ರ. ಖುದ್ದು ಪ್ರಧಾನಿಯವರೇ ದೇವೇಗೌಡರಿಗೆ ಇರುವ ರೈತಪರ ಕಾಳಜಿ ಬಗ್ಗೆ ಮಾತಾಡಿದರು ಎಂದರು.

Advertisement

ಕಾಂಗ್ರೆಸ್ ನವರು ಎಲ್ಲಾ ಭಾಗ್ಯಗಳನ್ನು ತಂದರು. ಆದರೆ ಈಗ ಎಲ್ಲಿದ್ದಾರೆ? ಅವರು 130 ರಿಂದ 78 ಸೀಟ್ ಗೆ ಬಂದಿದ್ದಾರೆ. ಬಿಜೆಪಿ ಅವಧಿಯಲ್ಲೂ ಕೆಲಸಗಳಾಗುತ್ತಿಲ್ಲ. ಬಿಜೆಪಿ ಶಾಸಕರೇ ನಮ್ಮ ಕ್ಷೇತ್ರಗಳಿಗೆ ಹಣ ಕೊಡುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಬಂಡೆಪ್ಪ ಕಾಶಂಪೂರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next