Advertisement

ಜೆಡಿಎಸ್‌ ಪಾಳಯ ಸೇರಿದ ಸ್ವತಂತ್ರ ಅಭ್ಯರ್ಥಿ

01:06 PM Feb 07, 2021 | Team Udayavani |

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಪಂ ವ್ಯಾಪ್ತಿಯ ಅಂಜನಾಪುರ ಕ್ಷೇತ್ರದ ಗ್ರಾಪಂ ಸದಸ್ಯೆ ಜ್ಯೋತಿ, ವರದರಾಜು ರೆಡ್ಡಿ ಮತ್ತು ಬೆಂಬಲಿಗರು ಶನಿವಾರ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು.

Advertisement

ತಾಲೂಕಿನ ಬಿಡದಿ ಕೇತಗನಹಳ್ಳಿಯ ತೋಟದ ಮನೆಯಲ್ಲಿ ರಾಮನಗರ ತಾಲೂಕಿನ ಮತ್ತು ಸ್ಥಳೀಯ ಜೆಡಿಎಸ್‌ ಪಕ್ಷದ ಮುಖಂಡರ ಸಮ್ಮುಖದಲ್ಲಿ ಜೆಡಿಎಸ್‌ ಸೇರಿದ ಮುಖಂಡರಿಗೆ  ಎಚ್‌. ಡಿ.ಕುಮಾರ ಸ್ವಾಮಿ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.

ಇದನ್ನೂ ಓದಿ :ಬೆಟ್ಟದಲ್ಲಿ  ಬೆಂಕಿ : ಚಿರತೆಗೆ ಹೆದರಿ ಜಾಗರಣೆ

ತಾಲೂಕು ಜೆಡಿಎಸ್‌ ಅಧ್ಯಕ್ಷ ರಾಜಶೇಖರ್‌ ಮಾತನಾಡಿ, ಚುನಾವಣೆಯಲ್ಲಿ ಗ್ರಾಪಂ ಸದಸ್ಯೆ ಜ್ಯೋತಿ ಯಾವ ಪಕ್ಷದ ಬೆಂಬಲವಿಲ್ಲದೆ ಸ್ಪರ್ಧಿಸಿದ್ದರು. ಈಗ ಜೆಡಿಎಸ್‌ ಸೇರಿದ್ದಾರೆ. ಪಕ್ಷದ ಧ್ಯೇಯ ಮತ್ತು ಕುಮಾ ರಸ್ವಾಮಿ ಜನಪರ ಆಡಳಿತ ಮೆಚ್ಚಿ ಪಕ್ಷಕ್ಕೆ ಸೇರ್ಪಡೆ ಯಾಗಿದ್ದಾರೆ ಎಂದು ತಿಳಿಸಿದರು. ಜಿಪಂ ಮಾಜಿ ಅಧ್ಯಕ್ಷ ಎಚ್‌.ಸಿ.ರಾಜಣ್ಣ, ವರದ ರಾಜು ರೆಡ್ಡಿ, ಗ್ರಾಪಂ ಸದಸ್ಯೆ ಮಂಗಳ ಗೌರಮ್ಮ, ಮಾಜಿ ಸದಸ್ಯ ರೇವಣ್ಣ ಬಾಬು ಹಾಜರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next