Advertisement

ಜೇಸಿಐ ಕುಕ್ಕೆಶ್ರೀಯ ನೂತನ ಪದಾಧಿಕಾರಿಗಳ ಪದಗ್ರಹಣ

05:02 PM Dec 16, 2017 | Team Udayavani |

ಸುಬ್ರಹ್ಮಣ್ಯ: ಯುವ ಜನಾಂಗದ ಅಭಿವೃದ್ಧಿಯೊಂದಿಗೆ ಸಮಾಜಮುಖಿ, ಸಾಂಸ್ಕೃತಿಕ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುವ ಸಂಸ್ಥೆ ಜೇಸಿಐ ಆಗಿದೆ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು. ಅವರು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

Advertisement

ಜೀವನಕ್ಕೆ ವಿಶೇಷವಾದ ಅರ್ಥವನ್ನು ನೀಡುವ ಬದುಕು ಕಟ್ಟಿಕೊಳ್ಳಲು ಜೇಸಿ ಆಧಾರಸ್ತಂಭ. ಸತ್ವಯುತವಾದ ಯುವ ಜನಾಂಗದ ಅಭಿವೃದ್ಧಿಗೆ ಈ ಸಂಸ್ಥೆ ಉತ್ಕೃಷ್ಟ ವಾದ ಕಾರ್ಯ ಮಾಡಿದೆ ಎಂದು ನಿತ್ಯಾನಂದ ಮುಂಡೋಡಿ ಹೇಳಿದರು.

ಪದ ಪ್ರದಾನ
ಸಮಾರಂಭದಲ್ಲಿ ನಿರ್ಗಮನ ಅಧ್ಯಕ್ಷೆ ಭಾರತಿ ದಿನೇಶ್‌ ಅವರು ನೂತನ ಅಧ್ಯಕ್ಷ ಮೋನಪ್ಪಾ ಡಿ. ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು. ಬಳಿಕ ನೂತನ ಪದಾಧಿಕಾರಿಗಳಾದ ಹರಿಪ್ರಸಾದ್‌ ನಾಯರ್‌ ಮಲ್ಲಾಜೆ, ಶೇಷ ಕುಮಾರ್‌ ಶೆಟ್ಟಿ, ಯೋಗನಾಥ್‌ ಎಸ್‌., ದೀಪಕ್‌ ನಂಬಿಯಾರ್‌, ಹರ್ಷಿತ್‌ ಪಡ್ರೆ, ಪ್ರಕಾಶ್‌ ಕೆ.ಎಸ್‌., ರೋಹಿತ್‌ ಬಿ.ಬಿ., ಜೇಸಿರೆಟ್‌ ವಿಭಾಗದ ಅಧ್ಯಕ್ಷೆ ಸೌಮ್ಯಾ ಭರತ್‌ ಹಾಗೂ ಜೂನಿಯರ್‌ ಜೇಸಿ ಅಧ್ಯಕ್ಷ ದೀಮಂತ್‌ ಎ.ಎಸ್‌. ಅಧಿಕಾರ ಸ್ವೀಕರಿಸಿದರು. ಬಳಿಕ ನೂತನ ಸದಸ್ಯರಾಗಿ ಜೇಸಿ ಕುಟುಂಬ ಸೇರಿದ ಆರು ಮಂದಿಗೆ ಪ್ರಮಾಣ ವಚನ ಬೋಧಿಸಲಾಯಿತು. ಪ್ರಾರಂಭದಲ್ಲಿ ನಿರ್ಗಮನ ಅಧ್ಯಕ್ಷೆ ಭಾರತಿ ದಿನೇಶ್‌ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಸಭಾಧ್ಯಕ್ಷತೆಯನ್ನು ನೂತನ ಅಧ್ಯಕ್ಷ ಮೋನಪ್ಪ ಡಿ. ವಹಿಸಿದ್ದರು.

ಭಾರತೀಯ ಜೇಸಿಸ್‌ನ ಪೂರ್ವ ರಾಜ್ಯ ಉಪಾಧ್ಯಕ್ಷ ದಿನಕರ ಗೌಡ, ಭಾರತೀಯ ಜೇಸಿಸ್‌ನ ರಾಷ್ಟ್ರೀಯ ನಾಯಕ ಚಂದ್ರ ಶೇಖರ ನಾಯರ್‌, ಜೇಸಿಸ್‌ ವಲಯ ಉಪಾಧ್ಯಕ್ಷ ರವಿ ಕಕ್ಕೆಪದವು, ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀಯ ಸ್ಥಾಪಕಾಧ್ಯಕ್ಷ ವಿಶ್ವನಾಥ್‌ ನಡುತೋಟ, ನಿಕಟಪೂರ್ವಾಧ್ಯಕ್ಷ ಮೋಹನದಾಸ ರೈ, ಕಾರ್ಯದರ್ಶಿ ದೀಪಕ್‌ ನಂಬಿಯಾರ್‌, ಜೂನಿಯರ್‌ ಜೇಸಿ ಅಧ್ಯಕ್ಷ ರಘುನಂದನ್‌ ಶರ್ಮ, ನಿಯೋಜಿತ ಅಧ್ಯಕ್ಷ ಧೀಮಂತ್‌ ಎ. ಎಸ್‌. ಉಪಸ್ಥಿತರಿದ್ದರು.

ಭಾರತಿ ದಿನೇಶ್‌ ಸ್ವಾಗತಿಸಿದರು. ಯೋಗನಾಥ್‌, ವಿಮಲಾ ರಂಗಯ್ಯ, ರೇಶ್ಮಾ ಪ್ರಕಾಶ್‌, ಹರಿಪ್ರಸಾದ್‌ ನಾಯರ್‌ ಮಲ್ಲಾಜೆ, ರತ್ನಾಕರ. ಎಸ್‌., ಸೌಮ್ಯಾ ಬಿ. ಪೈ., ರೇಶ್ಮಾ ಪ್ರಕಾಶ್‌, ಪ್ರಭಾಕರ ಪಡ್ರೆ ಪರಿಚಯಿಸಿದರು. ನೂತನ ಕಾರ್ಯದರ್ಶಿ ಲೋಕೇಶ್‌ ಪೀರನಮನೆ ವಂದಿಸಿದರು. ಪಂಜ, ಬೆಳ್ಳಾರೆ, ಕಡಬ, ಸುಳ್ಯ ಜೇಸಿಸ್‌ನ ಅಧ್ಯಕ್ಷರು ಮತ್ತು ಸದಸ್ಯರು, ಸುಬ್ರಹ್ಮಣ್ಯ ಜೇಸಿ ಸದಸ್ಯರು, ರೋಟರಿ ಮತ್ತು ಇನ್ನರ್‌ ವ್ಹೀಲ್‌ ಸದಸ್ಯರು, ಜೇಸಿ ಅಭಿಮಾನಿಗಳು ಉಪಸ್ಥಿತರಿದ್ದರು.

Advertisement

ಸಮ್ಮಾನ
ನಿರ್ಗಮನ ಅಧ್ಯಕ್ಷೆ ಭಾರತಿ ದಿನೇಶ್‌ ಅವರನ್ನು ಘಟಕದ ವತಿಯಿಂದ ಸಮಾರಂಭದಲ್ಲಿ ಸಮ್ಮಾನಿಸಲಾಯಿತು. ಭಾರತೀ ಯ ಜೇಸಿಸ್‌ನ ರಾಷ್ಟ್ರೀಯ ನಾಯಕ ಚಂದ್ರಶೇಖರ ನಾಯರ್‌, ನಿಯೋಜಿತ ವಲಯ ಉಪಾಧ್ಯಕ್ಷ ರವಿ ಕಕ್ಕೆಪದವು, ನೂತನವಾಗಿ ಜೇಸಿ ತರಬೇತುದಾರರಾಗಿ ಆಯ್ಕೆಯಾದ ಹರ್ಷಿತ್‌ ಪಡ್ರೆ ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next