Advertisement

ಜಯಾಗೆ ಯಾವುದೇ ಗಾಯ ಆಗಿರಲಿಲ್ಲ; ಆಸ್ಪತ್ರೆ ವರದಿ 

03:45 AM Mar 07, 2017 | Team Udayavani |

ನವದೆಹಲಿ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಸ್ಪತ್ರೆಗೆ ದಾಖಲಾಗುವ ಮುನ್ನ ಯಾವುದೇ ಗಾಯ, ಹೊಡೆತಕ್ಕೆ ಒಳಗಾಗಿರಲಿಲ್ಲ. ಅಲ್ಲದೆ, ಅವರಿಗೆ ಸ್ವೀಕಾರ ಯೋಗ್ಯವಲ್ಲದ ಔಷಧಗಳನ್ನು ನೀಡಿರಲಿಲ್ಲ ಎಂದು ತಮಿಳುನಾಡು ಸರ್ಕಾರ ಇದೀಗ ಸ್ಪಷ್ಟಪಡಿಸಿದೆ.

Advertisement

ಚೆನ್ನೈನ ಅಪೋಲೋ ಆಸ್ಪತ್ರೆ ಹಾಗೂ ದೆಹಲಿಯ ಏಮ್ಸ್‌ ಆಸ್ಪತ್ರೆಯ ವೈದ್ಯರು ಹಸ್ತಾಂತರಿಸಿರುವ ಜಯಲಲಿತಾರ ಚಿಕಿತ್ಸಾ ವರದಿಯನ್ನು ಬಹಿರಂಗಪಡಿಸುತ್ತಾ, ರಾಜ್ಯ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್‌ ಈ ವಿಚಾರ ತಿಳಿಸಿದ್ದಾರೆ. 

“ಜಯಾರನ್ನು ಯಾರೋ ನೂಕಿದ್ದರು. ಕೆಳಕ್ಕೆ ಬಿದ್ದ ಕಾರಣ ಅವರು ಗಾಯಗೊಂಡಿದ್ದರು. ಜತೆಗೆ, ಅವರಿಗೆ ದೀರ್ಘ‌ಧಿಕಾಲದಿಂದ ದೋಷಪೂರಿತ ಔಷಧಗಳನ್ನು ನೀಡಲಾಗುತ್ತಿತ್ತು’ ಎಂದು ಇತ್ತೀಚೆಗಷ್ಟೇ ಎಐಎಡಿಎಂಕೆ ಬಂಡಾಯ ನಾಯಕ ಪಿ.ಎಚ್‌. ಪಾಂಡಿಯನ್‌ ಆರೋಪಿಸಿದ್ದರು. 

ಜಯಾಗೆ ನೀಡಲಾದ ಪ್ರತಿ ಚಿಕಿತ್ಸೆಯ ಬಗ್ಗೆಯೂ ಗೆಳತಿ ಶಶಿಕಲಾಗೆ ಮಾಹಿತಿ ನೀಡಲಾಗುತ್ತಿತ್ತು ಎಂದು ವರದಿ ತಿಳಿಸಿದೆ. ಏಮ್ಸ್‌ನ ತಜ್ಞರು ಅಪೋಲೋಗೆ 5 ಬಾರಿ ಭೇಟಿ ನೀಡಿದ್ದನ್ನೂ, ಅವರ ವರದಿಯನ್ನೂ ಬಹಿರಂಗಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next