Advertisement

ಪಂಚಮಸಾಲಿಗಳ ಮೂತ್ರದಲ್ಲಿ ಜಂಗಮರು ಕೊಚ್ಚಿ ಹೋಗ್ತಾರೆ

01:15 PM Nov 09, 2017 | |

ದಾವಣಗೆರೆ : ಹುಬ್ಬಳ್ಳಿಯಲ್ಲಿ ನಡೆದ ಲಿಂಗಾಯತ ಮಹಾ ಸಮಾವೇಶದಲ್ಲಿ ವಿವಾದಾತ್ಮಕ ಭಾಷಣ ಮಾಡಿ ಸುದ್ದಿಯಾಗಿದ್ದ ಕೂಡಲ ಸಂಗಮ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಅವರ ಇನ್ನೊಂದು ಆಡಿಯೋ ಇದೀಗ ವೈರಲ್‌ ಆಗಿ ಹೊಸ ವಿವಾದ ಹುಟ್ಟು ಹಾಕಿದೆ. 

Advertisement

ಆಡಿಯೋದಲ್ಲಿರುವಂತೆ ಪೋನ್‌ನಲ್ಲಿ ಮಾತನಾಡುತ್ತಾ ‘ಜಂಗಮರು ಕೇವಲ 2 % ಇದ್ದಾರೆ. ಪಂಚಮಸಾಲಿಗಳು ಮೂತ್ರ ಮಾಡಿದರೆ ಜಂಗಮರು ಕೊಚ್ಚಿ ಹೋಗ್ತಾರೆ’ ಎಂದಿರುವುದು ಕೇಳಿ ಬಂದಿದೆ. 

ಸ್ವಾಮೀಜಿ ವಿರುದ್ಧ ಜಂಗಮರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ , ‘ಆಡಿಯೋ 2 ವರ್ಷದ ಹಿಂದಿನದ್ದು, ಈಗ ಅಪ್ರಸ್ತುತ. ಲಿಂಗಾಯತ ಧರ್ಮ ಹೋರಾಟ ಹತ್ತಿಕ್ಕಲು ಈಗ ಮತ್ತೆ ಬಿಡುಗಡೆ ಮಾಡಿ ವೈರಲ್‌ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ’ ಎಂದು ತಿಳಿಸಿದ್ದಾರೆ. 

ಹುಬ್ಬಳ್ಳಿ ಸಮಾವೇಶದಲ್ಲಿ ‘ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯತರು. ಐವರು ತಂದೆಗಳಿಗೆ ಹುಟ್ಟಿದವರು ವೀರಶೈವರು’ ಎಂದು ಭಾರೀ ವಿವಾದ ಹುಟ್ಟು ಹಾಕಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next